ರೊಚ್ಚಿಗೆದ್ದ ಬಿಗ್‍ಬಾಸ್ ಹೆಂಗಳೆಯರು

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತನಾಡುತ್ತಾರೆ. ಮೇಲ್ನೋಟಕ್ಕೆ ಮಾತ್ರ ಆ ನಗು, ಪ್ರೀತಿ, ಸಂತೋಷ ಪ್ರತಿಯೊಬ್ಬರ ಮನಸ್ಸಲ್ಲಿ ತಾನೂ ಗೆಲ್ಲಬೇಕು ಎನ್ನುವ ಆಸೆ ಇದೆ. ಆದರೆ ಅದನ್ನು ಯಾರು ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ಆದರೆ ಇದೀಗ ದೊಡ್ಡಮನೆ ಫಿಮೇಲ್ ಸ್ಪರ್ಧಿಗಳು ನಾವು ಗೆಲ್ಲಲೇ ಬೇಕು ಎಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ನಾವು ಎಲ್ಲವನ್ನು ಒಂದು ಕಡೆ ಬಿಟ್ಟು ಕೊಡುತ್ತಿದ್ದೇವೆ. ನಮಗೆ ಯಾರು ಇಷ್ಟ ಎಂದು ಕೇಳಿದರೆ ನಾವು ಪುರುಷರ ಹೆಸರನ್ನೇ ಸೂಚಿಸುತ್ತೇವೆ. ಮಂಜು, ರಾಘು, ಅರವಿಂದ್ ಎಂದು ಹೇಳುತ್ತೇವೆ. ಅಷ್ಟೇ ನಮ್ಮ ಪ್ರಪಂಚವಾಗಿದೆ. ಒಂದು ಬಾರಿಯಾದರೂ ನಮ್ಮ ಹೆಸರನ್ನು ಅವರೂ ಹೇಳಿದ್ದಾರಾ ಎಂದು ಶುಭ ಪ್ರಶ್ನಿಸಿದ್ದಾರೆ. ಅಲ್ಲಿಯೇ ಇದ್ದ ನಿಧಿ ಸುಬ್ಬಯ್ಯ ಹೌದು ಅವರು ಯಾವಾಗಲೂ ಟಾಸ್ಕ್ ಅನ್ವಯವಾಗಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ ಎಂದು ಹೆಸರನ್ನು ಸೂಚಿಸುತ್ತಾರೆ. ಬೇರೆ ಯಾರು ಕಾಣುವುದಿಲ್ಲ ಎಂದು ಮನೆಯವರ ನಡುವಳಿಕೆ ಕುರಿತಾಗಿ ಶುಭ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಮಾತನಾಡಿಕೊಂಡಿದ್ದಾರೆ.

ನಾವು ಯಾರಿಗೂ ಬಕೆಟ್ ಹಿಡಿಯಲ್ಲ. ನಾವು ಇರೋದನ್ನ ಹಾಗೇ ಹೇಳುತ್ತೇವೆ ಹಾಗಾಗಿ ಅವರ ನಮ್ಮ ಹೆಸರುಗಳನ್ನು ಸೂಚಿಸುವುದಿಲ್ಲ. ಮೂರು ಜನ ಹೆಣ್ಣು ಮಕ್ಕಳಾದರೂ ಫೈನಲ್ ನಲ್ಲಿ ಕುಳಿತುಕೊಳ್ಳಬೇಕು ಎಂದು ನಿಧಿ ಹೇಳಿದ್ದಾರೆ.

ಫೈನಲ್‍ನಲ್ಲಿ ಹೆಣ್ಣು ಮಕ್ಕಳು ಇರಬೇಕು ಹಾಗೇ ಆಡಬೇಕು!
ಹೌದು ನಾನು ಯೋಚನೆ ಮಾಡುತ್ತಿದ್ದೆ ಯಾವಾಗಲೂ ಯಾಕೆ ಹುಡುಗರೇ ಬಿಗ್‍ಬಾಸ್ ವೀನ್ ಆಗುತ್ತಾರೆ ಎಂದು. ನಾವು ಹೇಗೆ ಆಡಬೇಕು ಎಂದರೆ ಕೊನೆಯಲ್ಲಿ ಹೆಣ್ಣು ಮಕ್ಕಳು ಇರಬೇಕು. ಇಷ್ಟು ಸೀಸನ್ ಅಲ್ಲಿ ಶ್ರುತಿ ಮೇಡಂ ಒಬ್ಬರೆ ವಿನ್ ಆಗಿದ್ದು. ಅವರು ಗುಂಪಲ್ಲಿ ಗೋವಿಂದ ಆಗಲಿಲ್ಲ. ಹೀಗಾಗಿ ಅವರು ಬಿಗ್‍ಬಾಸ್ ಗೆದ್ದಿರುವುದು ಎಂದು ಶುಭ ಹೇಳುತ್ತಾ ಗೇಮ್ ಪ್ಲಾನ್ ಮಾಡಿದ್ದಾರೆ.

ಮನೆಯ ಸ್ಪರ್ಧಿಗಳ ಆಟ ಪ್ರಾರಂಭವಾಗಿದೆ. ತಮ್ಮನ್ನೂ ತಾವು ಬಚಾವ್ ಮಾಡಿಕೊಳ್ಳಲು ಹೊಸ ರೀತಿಯ ಉಪಾಯವನ್ನು ಹುಡುಕುತ್ತಿದ್ದಾರೆ. ನಾವು ಗೆಲ್ಲಲೇ ಬೇಕು ಎಂದು ಮನೆಯ ಹೆಂಗಳೆಯರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಮನೆಯಲ್ಲಿರುವ ಸೆಲೆಬ್ರಿಟಿ ಮಹಿಳಾ ಮಣಿಗಳು ಹೇಗೆ ಆಡುತ್ತಾರೆ. ಏನೆಲ್ಲಾ ಚಮತ್ಕಾರಗಳನ್ನು ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *