ರಾಜ್ಯದ ನಗರಗಳ ಹವಾಮಾನ ವರದಿ: 25-11-2020

Public TV
1 Min Read

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪುದುಚೇರಿಯ ಹತ್ತಿರ ಸುಮಾರು 450 ಕಿ.ಮೀ ದೂರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ. ಹೀಗಾಗಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ನಗರ, ಹೊನ್ನಾವರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ರಮೇಶ್ ಬಾಬು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ದಾವಣಗೆರೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 24-18
ಮಂಗಳೂರು: 33-24
ಶಿವಮೊಗ್ಗ: 32-10
ಬೆಳಗಾವಿ: 31-18
ಮೈಸೂರು: 28-19

ಮಂಡ್ಯ: 28-21
ರಾಮನಗರ: 27-21
ಮಡಿಕೇರಿ: 27-17
ಹಾಸನ: 27-18
ಚಾಮರಾಜನಗರ: 28-20

ಚಿಕ್ಕಬಳ್ಳಾಪುರ: 22-17
ಕೋಲಾರ: 23-19
ತುಮಕೂರು: 26-19
ಉಡುಪಿ: 33-25
ಕಾರವಾರ: 34-25

ಚಿಕ್ಕಮಗಳೂರು: 28-17
ದಾವಣಗೆರೆ: 31-21
ಚಿತ್ರದುರ್ಗ: 29-19
ಹಾವೇರಿ: 32-20
ಬಳ್ಳಾರಿ: 31-20

ಧಾರವಾಡ: 31-19
ಗದಗ: 31 – 21
ಕೊಪ್ಪಳ: 31-21
ರಾಯಚೂರು: 32-22
ಯಾದಗಿರಿ: 33-22

ವಿಜಯಪುರ: 23-18
ಬೀದರ್: 29-17
ಕಲಬುರಗಿ: 32-20
ಬಾಗಲಕೋಟೆ: 32-21

Share This Article
Leave a Comment

Leave a Reply

Your email address will not be published. Required fields are marked *