ರಾಜ್ಯದಲ್ಲಿ 6,317 ಮಂದಿಗೆ ಕೊರೊನಾ ದೃಢ- ಇಂದು 115 ಸಾವು

Public TV
2 Min Read

– ಇಂದು 7,071 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಇಂದು 6,317 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 2,33,283ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ, ಇಂದು 115 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 4062 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ರಾಜ್ಯದಲ್ಲಿ 7071 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 2,33,283 ಸೋಂಕಿತರ ಪೈಕಿ 80,643 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 1,48,562 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 695 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 14,489 ರ್ಯಾಪಿಡ್ ಟೆಸ್ಟ್ ನಲ್ಲಿ 23211 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 37,700 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 5,22,858 ಮಂದಿಗೆ ರ್ಯಾಪಿಡ್ ಟೆಸ್ಟ್, 15,52,228 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 2075086 ಮಂದಿಗೆ ಚಿಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 2053 ಮಂದಿಗೆ ಸೋಂಕು ದೃಢವಾಗಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91864 ಏರಿಕೆ ಆಗಿದೆ. ಬೆಂಗಳೂರು ನಗರ 2053, ಬಳ್ಳಾರಿ 319, ಮೈಸೂರು 597, ಶಿವಮೊಗ್ಗ 397, ಹಾಸನ 250, ಧಾರವಾಡ 201 ಹಾಗೂ ಉಡುಪಿಯಲ್ಲಿ 268 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು ಒಟ್ಟು 7 ಜಿಲ್ಲೆಯಲ್ಲಿ 200ಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಬಾಗಲಕೋಟೆ 101, ಬಳ್ಳಾರಿ 346, ಬೆಳಗಾವಿ 279, ಬೆಂಗಳೂರು ಗ್ರಾಮಾಂತರ 644, ಬೆಂಗಳೂರು ನಗರ 2190, ಬೀದರ್ 9, ಚಾಮರಾಜನಗರ 51, ಚಿಕ್ಕಬಳ್ಳಾಪುರ 163, ಚಿಕ್ಕಮಗಳೂರು 118, ಚಿತ್ರದುರ್ಗ 117, ದಕ್ಷಿಣ ಕನ್ನಡ 209, ದಾವಣಗೆರೆ 212, ಧಾರವಾಡ 180, ಗದಗ 104, ಹಾಸನ 276, ಹಾವೇರಿ 31, ಕಲಬುರಗಿ 194, ಕೊಡಗು 01, ಕೋಲಾರ 201, ಕೊಪ್ಪಳ 217, ಮಂಡ್ಯ 82, ಮೈಸೂರು 289, ರಾಯಚೂರು 142, ರಾಮನಗರ 32, ಶಿವಮೊಗ್ಗ 64, ತುಮಕೂರು 212, ಉಡುಪಿ 269, ಉತ್ತರ ಕನ್ನಡ 39, ವಿಜಯಪುರ 163 ಹಾಗೂ ಯಾದಗಿರಿ 135 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *