ರಾಜ್ಯದಲ್ಲಿ ಮೂರಂಕಿಗೆ ಇಳಿದ ಕೊರೊನಾ – ಇಂದು 998 ಹೊಸ ಪ್ರಕರಣ

Public TV
1 Min Read

– ಬೆಂಗಳೂರಿನಲ್ಲಿ 444 ಮಂದಿಗೆ ಸೋಂಕು
– ಹಾವೇರಿಯಲ್ಲಿ 123, ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿದಿದ್ದು, ಇಂದು 998 ಮಂದಿಗೆ ಸೋಂಕು ತಗುಲಿದೆ. ಇಂದು 2,209 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಕೊರೊನಾಗೆ 19 ಜನ ಮರಣ ಹೊಂದಿದ್ದು, ಸಾವನ್ನಪ್ಪಿದವರ ಸಂಖ್ಯೆ 11,778ಕ್ಕೇರಿಕೆಯಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ 8,84,897ಕ್ಕೆ ಏರಿಕೆಯಾಗಿದ್ದು, 23,279 ಸಕ್ರಿಯ ಪ್ರಕರಣಗಳಿವೆ. ಸದ್ಯ 349 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕೋವಿಡ್-19 ಸೋಂಕು ಖಚಿತ ಪ್ರಮಾಣ ಶೇ.1.22 ಮತ್ತು ಮರಣ ಪ್ರಮಾಣ ಶೇ.1.30ರಷ್ಟಿದೆ. ರಾಜಧಾನಿಯಲ್ಲಿಯೂ ಕೊರೊನಾ ಇಳಿಕೆಯಾಗಿದ್ದು, ಇಂದು 444 ಹೊಸ ಪ್ರಕರಣಗಳು ವರದಿಯಾಗಿವೆ. ಇವತ್ತು 81,333 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ 12, ಬೆಂಗಳೂರು ಗ್ರಾಮಾಂತರ 23, ಬೆಂಗಳೂರು ನಗರ 444, ಬೀದರ್ 2, ಚಾಮರಾಜನಗರ 4, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 14, ಚಿತ್ರದುರ್ಗ 1, ದಕ್ಷಿಣ ಕನ್ನಡ 27, ದಾವಣಗೆರೆ 11, ಧಾರವಾಡ 8, ಗದಗ 3, ಹಾಸನ 45, ಹಾವೇರಿ 123, ಕಲಬುರಗಿ 15, ಕೊಡಗು 4, ಕೋಲಾರ 12, ಕೊಪ್ಪಳ 10, ಮಂಡ್ಯ 30, ಮೈಸೂರು 43, ರಾಯಚೂರು 10, ರಾಮನಗರ 8, ಶಿವಮೊಗ್ಗ 14, ತುಮಕೂರು 43, ಉಡುಪಿ 14, ಉತ್ತರ ಕನ್ನಡ 21, ವಿಜಯಪುರ 30 ಮತ್ತು ಯಾದಗಿರಿಯಲ್ಲಿ 4 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *