ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇಂದು 4,272 ಜನರಿಗೆ ಸೋಂಕು ತಗುಲಿದೆ. ಇಂದು ಮಹಾಮಾರಿ ರಾಜ್ಯದಲ್ಲಿ 115 ಜನರನ್ನು ಬಲಿ ಪಡೆದುಕೊಂಡಿದೆ.
ಇಂದು 6,126 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 1,05,226 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇದುವರೆಗೂ 28,31,026 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 34,654 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಶೇಕಡಾವಾರು ಪ್ರಮಾಣ ಶೇ.2.58 ಮತ್ತು ಮರಣ ಪ್ರಮಾಣ ಶೇ.2.69ರಷ್ಟಿದೆ.
ಇಂದು ಒಟ್ಟು 1,65,010 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೊಸದಾಗಿ ಯಾವುದೇ ಡೆಲ್ಟಾ ಪ್ಲಸ್ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರಿನಲ್ಲಿ 955 ಜನಕ್ಕೆ ಇವತ್ತು ಸೋಂಕು ತಗುಲಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 65,997 ಸಕ್ರಿಯ ಪ್ರಕರಣಗಳಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 61, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 89, ಬೆಂಗಳೂರು ನಗರ 955, ಬೀದರ್ 1, ಚಾಮರಾಜನಗರ 71, ಚಿಕ್ಕಬಳ್ಳಾಪುರ 52, ಚಿಕ್ಕಮಗಳೂರು 200, ಚಿತ್ರದುರ್ಗ 75, ದಕ್ಷಿಣ ಕನ್ನಡ 375, ದಾವಣಗೆರೆ 80, ಧಾರವಾಡ 60, ಗದಗ 30, ಹಾಸನ 320, ಹಾವೇರಿ 27, ಕಲಬುರಗಿ 22, ಕೊಡಗು 160, ಕೋಲಾರ 134, ಕೊಪ್ಪಳ 26, ಮಂಡ್ಯ 134, ಮೈಸೂರು 647, ರಾಯಚೂರು 19, ರಾಮನಗರ 13, ಶಿವಮೊಗ್ಗ 217, ತುಮಕೂರು 159, ಉಡುಪಿ 139, ಉತ್ತರ ಕನ್ನಡ 62, ವಿಜಯಪುರ 12 ಮತ್ತು ಯಾದಗಿರಿಯಲ್ಲಿ 14 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.