ರಾಜ್ಯದಲ್ಲಿ ದಲಿತ ಸಿಎಂ ಆಗಲೇಬೇಕು: ರಮೇಶ್ ಜಿಗಜಿಣಗಿ

Public TV
1 Min Read

ವಿಜಯಪುರ: ರಾಜ್ಯದಲ್ಲಿ ದಲಿತ ಸಿಎಂ ಆಗಲೇ ಬೇಕು. ನಾನೇ ಸಿಎಂ ಆಗಬೇಕೆಂದೇನಿಲ್ಲ. ಯಾರಾದರೂ ಒಬ್ಬರು ದಲಿತ ಸಿಎಂ ಆಗಲೇಬೇಕು ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಶೇ.2-3ರಷ್ಟು ಇರೋರು ಸಿಎಂ ಆಗಿದ್ದಾರೆ. ಶೇ.23ರಷ್ಟು ಇರೋ ದಲಿತರು ಸಿಎಂ ಯಾಕೆ ಆಗಬಾರದು ಎಂದು ಪ್ರಶ್ನಿಸಿದರು.

ದಲಿತರು ಸಿಎಂ ಆಗಬೇಕು ಅನ್ನೋ ಆಸೆ ನನ್ನದು. ಒಂದಿಲ್ಲ ಒಂದು ದಿನ ದೇವರೇ ದಲಿತರನ್ನ ಸಿಎಂ ಮಾಡ್ತಾನೆ. ನೀವೆಲ್ಲ ಬೇಡ ಅಂದರೂ ದೇವರೇ ದಲಿತರನ್ನ ಸಿಎಂ ಮಾಡ್ತಾನೆ ಅಂತ ವಿಶ್ವಾಸ ವ್ಯಕ್ತಪಡಿಸಿದರು.

ಇಧೆ ವೇಳೆ ಸಿಡಿ ಪ್ರಕರಣ ಸಂಬಂಧ ಮಾತನಾಡಿದ ಸಂಸದ, ನಾನು ಸಿಡಿ ನೋಡಿಲ್ಲ, ಸಿಡಿದು ಏನಿದೆ ಗೊತ್ತಿಲ್ಲ. ರಾಜ್ಯದಲ್ಲಿ ಸಿಡಿ ಬೆಳವಣಿಗೆ ತಪ್ಪು. ನಾನು ಮಾಡಿದರೂ ಅದು ತಪ್ಪು. ಯಾರು ಮಾಡಿದರೂ ಅದು ತಪ್ಪೇ ಎಂದು ಅವರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *