ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ: ಲಾಕ್‍ಡೌನ್ ನಡುವೆ ಆರ್‍ಟಿಪಿಎಸ್‍ನ 68 ಕಾರ್ಮಿಕರ ವಜಾ

Public TV
1 Min Read

– ಕೆಲಸದಿಂದ ತಗೆಯದಂತೆ ಕಾರ್ಮಿಕರಿಂದ ಹೋರಾಟ

ರಾಯಚೂರು: ಅಂಫಾನ್ ಚಂಡಮಾರುತ ಹಿನ್ನೆಲೆ ವಿದ್ಯುತ್ ಬೇಡಿಕೆ ತಗ್ಗಿದ್ದು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಕೇವಲ ಎರಡು ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ವಿದ್ಯುತ್ ಬೇಡಿಕೆ ಕುಸಿತವಾಗಿರುವುದು ಕಾರ್ಮಿಕರ ಕೆಲಸವನ್ನೂ ಕಸಿದುಕೊಂಡಿದೆ. ಇಲ್ಲಿನ ಶಕ್ತಿನಗರದಲ್ಲಿರುವ ಆರ್‍ಟಿಪಿಎಸ್ ವಿದ್ಯುತ್ ಕೇಂದ್ರಕ್ಕೆ ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯವಿದ್ದು, ಈಗ ಎರಡು ಘಟಕಗಳಿಂದ ಕೇವಲ 282 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಸದ್ಯ 9,270 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಜಲ ಹಾಗೂ ಪವನ ಶಕ್ತಿಯಿಂದ ಉತ್ಪಾದನೆ ಹೆಚ್ಚಳವಾಗಿದೆ. ಹೀಗಾಗಿ ಶಾಖೋತ್ಪನ್ನ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಕಡಿತಗೊಂಡಿದೆ.

ವಿದ್ಯುತ್ ಬೇಡಿಕೆ ಕುಸಿತದಿಂದಾಗಿ ಆರ್‍ಟಿಪಿಎಸ್ 8ನೇ ಘಟಕದಲ್ಲಿ ಕೆಲಸಮಾಡುತ್ತಿದ್ದ 68 ಜನ ಕೆಲಸ ಕಳೆದುಕೊಂಡಿದ್ದಾರೆ. ಗುತ್ತಿಗೆಯ ಅವಧಿ ಮುಗಿದಿದ್ದು, ಇದೇ ವೇಳೆ ವಿದ್ಯುತ್ ಬೇಡಿಕೆ ಕುಸಿದಿದ್ದರಿಂದ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿದೆ. ಇದರಿಂದ ಕಾರ್ಮಿಕರು ಹೋರಾಟ ನಡೆಸಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ವಜಾ ಮಾಡಿರುವುದಕ್ಕೆ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಕೆಲಸದಿಂದ ತೆಗೆಯಬಾರದು, ವೇತನ ಕಡಿಮೆ ಮಾಡಬಾರದು ಎಂಬ ನಿಯಮವಿದ್ದರೂ ಆರ್‍ಟಿಪಿಎಸ್ ಕಾರ್ಮಿಕರನ್ನು ಕೆಸಲದಿಂದ ತೆಗೆದಿದೆ.

Share This Article
Leave a Comment

Leave a Reply

Your email address will not be published. Required fields are marked *