-ಬೆಂಗಳೂರಿನಲ್ಲಿ 4,192 ಮಂದಿಗೆ ಕೊರೊನಾ
ಬೆಂಗಳೂರು: ರಾಜ್ಯದಲ್ಲಿಂದು 7,710 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 65 ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 6,748 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕೋವಿಡ್19: ಇಂದಿನ ವರದಿ#KarnatakaFightsCorona#Covid19KarnatakaUpdate???? pic.twitter.com/IEGG97z6kT
— B Sriramulu (@sriramulubjp) September 24, 2020
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,48,557ಕ್ಕೇರಿಕೆಯಾಗಿದ್ದು, 95,549 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ಮರಣ ಹೊಂದಿದವರ ಸಂಖ್ಯೆ 8,331ಕ್ಕೆ ಏರಿಕೆ ಕಂಡಿದ್ದು, ಇನ್ನು 827 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 4,83,698 ಮಂದಿಗೆ ಕ್ವಾರಂಟೈನ್ ನಲ್ಲಿದ್ದಾರೆ.
ಇಂದಿನ 24/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/U8xkJgjKU5 pic.twitter.com/6mU2yvMGb9
— K'taka Health Dept (@DHFWKA) September 24, 2020
ಸಿಲಿಕಾನ್ ಸಿಟಿಯಲ್ಲಿ ಇಂದು ಸಹ ಕೊರೊನಾ ಸ್ಫೋಟವಾಗಿದ್ದು, ಒಂದೇ ದಿನ 4,192 ಹೊಸ ಪ್ರಕರಣಗಳು ವರದಿಯಾಗಿವೆ. ಕೊರೊನಾಗೆ ರಾಜಧಾನಿಯ 24 ಜನರನ್ನು ಇಂದು ಬಲಿ ಪಡೆದುಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,08,467ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 60, ಬಳ್ಳಾರಿ 21, ಬೆಳಗಾವಿ 191, ಬೆಂಗಳೂರು ಗ್ರಾಮಾಂತರ 189, ಬೆಂಗಳೂರು ನಗರ 4,192, ಬೀದರ್ 71, ಚಾಮರಾಜನಗರ 17, ಚಿಕ್ಕಬಳ್ಳಾಪುರ 45, ಚಿಕ್ಕಮಗಳೂರು 186, ಚಿತ್ರದುರ್ಗ 64, ದಕ್ಷಿಣ ಕನ್ನಡ 266, ದಾವಣಗೆರೆ 131, ಧಾರವಾಡ 264, ಗದಗ 54, ಹಾಸನ 407, ಹಾವೇರಿ 110, ಕಲಬುರಗಿ 85, ಕೊಡಗು 2, ಕೋಲಾರ 31, ಕೊಪ್ಪಳ 56, ಮಂಡ್ಯ 86, ಮೈಸೂರು 481, ರಾಯಚೂರು 52, ರಾಮನಗರ 12, ಶಿವಮೊಗ್ಗ 234, ತುಮಕೂರು 99, ಉಡುಪಿ 74, ಉತ್ತರ ಕನ್ನಡ 109, ವಿಜಯಪುರ 79 ಮತ್ತು ಯಾದಗಿರಿಯಲ್ಲಿ 42 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.