– ರಾಜ್ಯದಲ್ಲಿಂದು 5,815 ಕೊರೊನಾ ಕೇಸ್, 161 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು 5,815 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 161 ಸೋಂಕಿರನ್ನು ಮಾಹಾಮಾರಿ ಬಲಿ ಪಡೆದುಕೊಂಡಿದೆ.
ಇಂದು 11,832 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ 1,30,872 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 33,602 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.38ಕ್ಕೆ ಇಳಿಕೆಯಾಗಿದೆ. 2 ತಿಂಗಳ ಬಳಿಕ ಅತಿ ಕಡಿಮೆ ಪಾಸಿಟಿವಿಟಿ ರೇಟ್ ದಾಖಲಾಗಿದೆ. ಕೋವೀಡ್-19 ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.2.76ರಷ್ಟಿದೆ. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್ಲಾಕ್- ನಿಯಮಗಳೇನು?
ರಾಜ್ಯದಾದ್ಯಂತ 1,71,765 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನಲ್ಲಿಂದು 1,263 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 23 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 72,263 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರ, ಬಳ್ಳಾರಿ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಂಕಿಯಲ್ಲಿದೆ. ಬೀದರ್, ಬಾಗಲಕೋಟೆ, ಕಲಬುರಗಿ ಮತ್ತು ಯಾದಗಿರಿಯಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 11, ಬಳ್ಳಾರಿ 128, ಬೆಳಗಾವಿ 222, ಬೆಂಗಳೂರು ಗ್ರಾಮಾಂತರ 161, ಬೆಂಗಳೂರು ನಗರ 1,263, ಬೀದರ್ 3, ಚಾಮರಾಜನಗರ 113, ಚಿಕ್ಕಬಳ್ಳಾಪುರ 105, ಚಿಕ್ಕಮಗಳೂರು 177, ಚಿತ್ರದುರ್ಗ 113, ದಕ್ಷಿಣ ಕನ್ನಡ 832, ದಾವಣಗೆರೆ 194, ಧಾರವಾಡ 83, ಗದಗ 28, ಹಾಸನ 391, ಹಾವೇರಿ 20, ಕಲಬುರಗಿ 28, ಕೊಡಗು 135, ಕೋಲಾರ 132, ಕೊಪ್ಪಳ 62, ಮಂಡ್ಯ 208, ಮೈಸೂರು 594, ರಾಯಚೂರು 16, ರಾಮನಗರ 24, ಶಿವಮೊಗ್ಗ 223, ತುಮಕೂರು 182, ಉಡುಪಿ 174, ಉತ್ತರ ಕನ್ನಡ 144, ವಿಜಯಪುರ 44 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.