ರಾಜೀನಾಮೆ ಪತ್ರ ಟೈಪ್ ಮಾಡಿಟ್ಕೊಂಡಿದ್ದೇನೆ – ಸಚಿವ ಸ್ಥಾನ ಬಿಟ್ಟು ಕೊಡಲು ಸಿ.ಟಿ ರವಿ ರೆಡಿ

Public TV
1 Min Read

ಚಿಕ್ಕಮಗಳೂರು: ಯಾವುದೇ ಗೊಂದಲವಿಲ್ಲದೆ ರಾಜೀನಾಮೆ ಪತ್ರ ಟೈಪ್ ಮಾಡಿಟ್ಟುಕೊಂಡಿದ್ದೇನೆ. ಅತೀ ಶೀಘ್ರವೇ ಬೆಂಗಳೂರಿಗೆ ತೆರಳುವುದಾಗಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಹೌದು. ಸಚಿವ ಸ್ಥಾನ ಬಿಟ್ಟು ಕೊಡೋದಕ್ಕೆ ಸಿ.ಟಿ.ರವಿ ರೆಡಿಯಾಗಿದ್ದಾರೆ. ಈಗಾಗಲೇ ರಾಜೀನಾಮೆ ಪತ್ರ ಟೈಪ್ ಮಾಡಿಕೊಂಡಿರುವ ಅವರು ಅಕ್ಟೋಬರ್ 2 ರಂದು ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಆಯ್ಕೆ

ಸಿಎಂ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇನೆ. ದಿವಂಗತ ಸುರೇಶ್ ಅಂಗಡಿ ಅವರು ನಮ್ಮ ಜೊತೆಗಿಲ್ಲ. ಸುರೇಶ್ ಅಂಗಡಿಯವರಿಗೆ ಯಾವತ್ತೂ ಸಿಎಂ ಹುದ್ದೆಯ ಬಗ್ಗೆ ಅಪೇಕ್ಷೆ ಇರಲಿಲ್ಲ ಎಂದು ಇದೇ ವೇಳೆ ಅಂಗಡಿಯವರನ್ನು ನೆನಪು ಮಾಡಿಕೊಂಡರು.

ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡ ಬಳಿಕ ಮಾತನಾಡಿದ್ದ ಸಿಟಿ ರವಿ, ಪಕ್ಷ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಪಕ್ಷದಲ್ಲಿ ಇಷ್ಟೊಂದು ದೊಡ್ಡ ಜವಾಬ್ದಾರಿ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆದರೆ ಪಕ್ಷ ನನ್ನನ್ನು ಗುರುತಿಸಿ ದೊಡ್ಡ ಜವಬ್ದಾರಿಯ ಹೊಣೆ ನೀಡಿದೆ. ವರಿಷ್ಠರ ಅಪೇಕ್ಷೆಗೆ ತಕ್ಕಂತೆ ಸಂಘಟನೆಗೋಸ್ಕರ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *