ರಾಜಧಾನಿಯಲ್ಲಿಂದು ವಿಂಟೇಜ್ ಕಾರುಗಳ ರಾಯಲ್ ರ‍್ಯಾಲಿ

Public TV
1 Min Read

ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ರಾಜಧಾನಿಯಲ್ಲಿಂದು ವಿಂಟೇಜ್ ಕಾರ್‌ಗಳ ರಾಯಲ್ ರ‍್ಯಾಲಿ ಮಾಡಲಾಗಿದೆ.

ಸಾರಿಗೆ ಇಲಾಖೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಸ್ತೆ ಸುರಕ್ಷತೆ – ಜೀವನದ ರಕ್ಷೆ ಎಂಬ ಧ್ಯೇಯದೊಂದಿಗೆ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತ್ತು.

ಈ ರ‍್ಯಾಲಿಯಲ್ಲಿ ವಿಶೇಷವಾಗಿ ವಿಂಟೇಜ್ ಕಾರ್, ಬೈಕ್ ಹಾಗೂ ಆಟೋಗಳ ರ‍್ಯಾಲಿ ನಡೆಸಲಾಯಿತು. ಈ ವಿಶೇಷ ಕಾರ್‌ಗ ರ‍್ಯಾಲಿಗೆ ಸಾರಿಗೆ ಆಯುಕ್ತ ನರೇಂದ್ರ ಹೊಲ್ಕರ್ ಚಾಲನೆ ನೀಡಿದರು. ನಗರದ ಕಸ್ತೂರಿ ನಗರದಿಂದ ಕಸ್ತೂರಬಾ ರೋಡ್‍ವರೆಗೂ ನಡೆದ ರಾಯಲ್ ಕಾರ್‌ಗಳ ರ‍್ಯಾಲಿ ಜನರ ಗಮನ ಸೆಳೆಯಿತು.


ಈ ರ‍್ಯಾಲಿಯಲ್ಲಿ ಡೈಂಮ್ಲರ್ ಬಿಬಿ18, ಫೋರ್ಡ್ ಎ, ಆಸ್ಟೀನ್, ಮೋರೆಸ್ , ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್, ಶೆವರ್ಲೆ, ಸೇರಿದಂತೆ ಹಲವು ಕಾರ್‌ಗಳಿದ್ದವು. ಮೈಸೂರು ಮಹಾರಾಜರು ಬಳಸುತ್ತಿದ್ದ ಕಾರು ಸೇರಿದಂತೆ ಹಲವು ದೇಶಗಳಿಂದ ಆಮದು ಆಗಿದ್ದ ಕಾರ್‍ಗಳಿದ್ದವು. ಬೈಕರ್ಸ್, ಲೇಡಿ ಆಟೋ ಡ್ರೈವರ್‍‍ಗಳು ರ‍್ಯಾಲಿ ಮಾಡುವುದರ ಮೂಲಕ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

ಪ್ರತಿ ಬಾರಿಯೂ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದ್ದು ಸಾರಿಗೆ ಇಲಾಖೆ ಜನರಿಗೆ ಅರಿವು ಮೂಡಿಸುತ್ತಲೇ ಇರುತ್ತದೆ. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಮತ್ತು ವಿಶೇಷವಾಗಿ ರೋಡ್ ರೂಲ್ಸ್‍ಗಳನ್ನ ಜನರಿಗೆ ಹೇಳಿ ಕೊಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *