ರಾಜಕೀಯ ಸ್ವರೂಪ ಪಡೆದ ಸಿಡಿ ಪ್ರಕರಣ – ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ಸಿಡಿ ವಾಗ್ವಾದ

Public TV
1 Min Read

ಬೆಂಗಳೂರು: ಸಿಡಿ ಪ್ರಕರಣ ರಾಜಕೀಯ ಸ್ವರೂಪ ಪಡೆದಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ವಾಗ್ವ್ಯುದ್ದಕ್ಕೆ ಕಾರಣವಾಗಿದೆ.

ಇಂದಿನ ವಿಧಾನಮಂಡಲ ಕಲಾಪದಲ್ಲಿ ಕಾಂಗ್ರೆಸ್ ಸಿಡಿ ವಿಚಾರ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಹಳೆ ಸಿಡಿಯ ಆ ವಿಷಯ ಹೊಸ ಸಿಡಿಯ ಈ ವಿಷಯ ಎರಡು ಕಾಂಗ್ರೆಸ್‍ನ ಪ್ರಬಲ ಅಸ್ತ್ರಗಳಾಗಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲ್ಯಾನ್ ಮಾಡಿಕೊಂಡಿದೆ.

ರಮೇಶ್ ಜಾರಕಿಹೊಳಿಯವರ ಮೊದಲ ಸಿಡಿಯಲ್ಲಿ ಸಿಎಂ ಯಡಿಯೂರಪ್ಪ ಕರಪ್ಟ್ ಅಂದಿರುವ ವಿಷಯದ ಬಗ್ಗೆ ಸದನದಲ್ಲಿ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿಯಲಿದೆ. ಅಲ್ಲದೆ ಯುವತಿ ಬಿಡುಗಡೆ ಮಾಡಿದ ಸಿಡಿಯಲ್ಲಿ ತನ್ನನ್ನು ನಂಬಿಸಿ ದ್ರೋಹ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅದರ ಬಗ್ಗೆಯೂ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ಸಿದ್ಧವಾಗಿದೆ.

ಒಟ್ಟಿನಲ್ಲಿ ಕನಿಷ್ಟ ಎರಡು ದಿನದ ಮಟ್ಟಿಗೆ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕೈ ಪಾಳಯ ಸಿದ್ಧತೆ ಮಾಡಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *