ರಾಜಕಾರಣಿ ಜೊತೆಗಿನ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

Public TV
1 Min Read

ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಜೊತೆಗೆ ರಾಧಿಕಾ ಕುಮಾರಸ್ವಾಮಿ ಇರುವ ಫೋಟೋ ವೈರಲ್ ಆಗಿದೆ. ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆ ಕೇಸ್‍ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ವಂಚನೆ ಕೇಸ್‍ನಲ್ಲಿ ಯುವರಾಜ್‍ನನ್ನು ಈಗಾಗಲೇ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಿದ್ದರು. ಯುವರಾಜ್ ಮೊಬೈಲ್‍ನಲ್ಲಿ ರಾಧಿಕಾ ಕುಮಾರಸ್ವಾಮಿ-ನಿರಾಣಿ ಜೊತೆಗಿರುವ ಫೋಟೋ ಪತ್ತೆಯಾಗಿದೆ ಎನ್ನಲಾಗಿದೆ. ರಾಧಿಕಾ ವಿಚಾರಣೆಗೆ ಹಾಜರಾದ ಮರುದಿನವೇ ನಿರಾಣಿ ಜೊತೆಗಿನ ಫೋಟೋ ಹರಿದಾಡುತ್ತಿದೆ.

ಯುವರಾಜ್ ಅಲಿಯಾಸ್ ಸ್ವಾಮಿ ರಾಜಕಾರಣಿಗಳ ಜೊತೆಗೆ ಫೋಟೋದಲ್ಲಿದ್ದಾನೆ. ಉಪ ಮುಖ್ಯಮಂತ್ರಿ, ಸಚಿವರು, ಎಂಎಲ್‍ಸಿ ಜೊತೆಗೆ ಯುವರಾಜ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಈ ಹಿಂದೆ ಯುವರಾಜ್ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸನ್ಮಾನ ಮಾಡಿದ್ದನು. ಸಚಿವ ವಿ.ಸೋಮಣ್ಣ, ಎಂಎಲ್‍ಸಿ ಯೋಗೇಶ್ವರ್ ಜೊತೆಗೆ ಯುವರಾಜ್ ಫೋಟೋವನ್ನು ತೆಗೆಸಿಕೊಂಡಿದ್ದಾನೆ. ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಬೆಂಗಳೂರು ಪೊಲೀಸ್ ಅಯುಕ್ತರಾಗಿದ್ದ ಭಾಸ್ಕರ್ ರಾವ್ ಅವರಿಗೂ ಯುವರಾಜ ಸನ್ಮಾನ ಮಾಡಿದ್ದಾನೆ.

ಯುವರಾಜ್ ವಂಚನೆ ಕೇಸ್‍ನಲ್ಲಿರುವ ರಾಧಿಕಾ ಕುಮಾರಸ್ವಾಮಿ ಪ್ರೆಸ್‍ಮೀಟ್ ನಡೆಸಿದ್ದರು. ಅಷ್ಟೊಂದು ಮೊತ್ತದ ಹಣ ನನ್ನ ಖಾತೆಗೆ ಬಂದಿಲ್ಲ. ಅವರು ನನಗೆ 17 ವರ್ಷಗಳಿಂದ ಗೊತ್ತು. ಸಿನಿಮಾ ವಿಚಾರವಾಗಿ ಭೇಟಿಯಾಗಿದ್ದೇವೆ ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಹೇಳಿದ್ದರು. ನಂತರ ಸಿಸಿಬಿ ವಿಚಾರಗೆ ಬರುವಂತೆ ರಾಧಿಕಾ ಕುಮಾರ್ ಸ್ವಾಮಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾಧಿಕಾ ಮತ್ತು ಯುವರಾಜ್‍ನಿಗೆ ವಿಚಾರಣೆ ನಡೆದಿತ್ತು. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ನಗು ಮುಖದಿಂದ ರಾಧಿಕಾ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಹೇಳಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *