ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

Public TV
2 Min Read

– ಆಕೆ ನನ್ನ ದೇವತೆ, ಕನಸಿನ ರಾಣಿ

ಚಿತ್ರದುರ್ಗ: ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿ ನಟಿ ರಾಗಿಣಿ ಜೈಲುಪಾಲಾಗಿರುವ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದ ರಾಗಿಣಿ ಅಭಿಮಾನಿಯೋರ್ವ ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ ಎಂದಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಆರ್‍ಟಿಐ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಿ.ಸುಧಾಕರ್ ವೀಡಿಯೋ ಮಾಡಿ ಅದನ್ನು ಎಲ್ಲೆಡೆ ವೈರಲ್ ಮಾಡಿದ್ದಾರೆ.

ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ ಎಂದು ಅಭಿಮಾನವ್ಯಕ್ತಪಡಿಸಿದ್ದಾನೆ. ಅಲ್ಲದೇ ರಾಗಿಣಿಗೆ ಡ್ರಗ್ಸ್ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ನಾನು ರಾಗಿಣಿ ಅಭಿಮಾನಿ, ಅವಳು ನನ್ನ ಕನಸಿನ ರಾಣಿ ಎನಿಸಿದ್ದಾಳೆ. ಅವಳ ಜೀವ ಉಳಿಸಲು ಅವಳಿಗೆ ನನ್ನ ರಕ್ತ ಬೇಕಿದ್ದರೆ ಕೊಡುವೆ. ಹಾಗೆಯೇ ನನ್ನದು O+ve ಬ್ಲಡ್ ಗ್ರೂಪ್ ಆಗಿದ್ದು, ಅವಳಿಗೆ ನನ್ನ ರಕ್ತ ಕೊಡಲು ಸಿದ್ಧನಿದ್ದೇನೆ. ಯಾಕಂದ್ರೆ ರಾಗಿಣಿಯನ್ನು ಉಳಿಸುವುದೇ ನನ್ನ ಧ್ಯೇಯವಾಗಿರೋದ್ರಿಂದ ಆಕೆಗೆ ನನ್ನ ಪ್ರಾಣ ಬೇಕಾದರೂ ಕೊಡ್ತೀನಿ ಅಂತ ಪುನರುಚ್ಚರಿಸಿದ್ದಾರೆ.

ಈ ಸಮಾಜದಲ್ಲಿ ಅನ್ಯಾಯ ಅದವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಆಗಿದೆ. ರಾಜಕೀಯದಲ್ಲಿ ಯಾರು ಯಾರು ಏನ್ ಮಾಡಿದರೆಂದು ನನಗೆ ಗೊತ್ತಿದೆ. ಹೀಗಾಗಿ ಆರ್.ಟಿ.ಐ ನಲ್ಲಿ ಎಲ್ಲಾ ರೆಕಾರ್ಡ್ ತೆಗಿಸಿ, ಡ್ರಗ್ಸ್ ಮಾಫಿಯಾ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟಹಾಕ್ತಿನಿ. ಆದರೆ ನನಗೆ ರಾಗಿಣಿ ಬೇಕು, ನಾನು ರಾಗಿಣಿ ಅಭಿಮಾನಿ ಅಂತ ತನ್ನ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿರುವ ವೈರಲ್ ಆಗಿದೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

ಕಳೆದ ಸೋಮವಾರ ನ್ಯಾಯಾಲಯ ನಟಿ ರಾಗಿಣಿ ದ್ವಿವೇದಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಬುಧವಾರ ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ಪರ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಾಮೀನು ಅರ್ಜಿಯ ವಿಚಾರಣೆಯನ್ನ ಸೆ.19ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದರು. ಹೀಗಾಗಿ ನಾಳೆ ರಾಗಿಣಿಯ ಬೇಲ್ ಅರ್ಜಿ ವಿಚಾರಣೆ ಇದ್ದು ಎಲ್ಲರ ಚಿತ್ತ ಶನಿವಾರದತ್ತ ನೆಟ್ಟಿದೆ. ನಾಳೆ ಬೇಲ್ ಆಗುತ್ತಾ ಅಥವಾ ಜೈಲಿನಲ್ಲಿಯೇ ನಟಿ ಇರ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *