ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್: ಬೈರತಿ ಬಸವರಾಜ್

Public TV
1 Min Read

– ಗೋಕಾಕ್ ಟಿಹೆಚ್‍ಓ ಸ್ಪಷ್ಟನೆ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಆಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನುಷ್ಯ ಅಂದ ಮೇಲೆ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯಾತ್ಯಾಸಗಳು ಆಗುತ್ತಲೇ ಇರುತ್ತದೆ. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರಲು ಸಾಧ್ಯವೇ? ಮನುಷ್ಯ ಅಂದ ಮೇಲೆ ಕಾಯಿಲೆಗಳು ಬಂದೇ ಬರುತ್ತದೆ. ಅದನ್ನು ನಿವಾರಿಸಲು ವೈದ್ಯರು ಇರುತ್ತಾರೆ. ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ ಕೊರೊನಾ ಮುಗಿದ ಬಳಿಕ 3-4 ದಿನಗಳಿದ್ದಂತೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಸದ್ಯ ಕೊರೊನಾಗೆ ರಮೇಶ್ ಜಾರಕಿಹೊಳಿ ಬೆಂಗಳೂರಿನ ನಿವಾಸದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದವರು ಮಾಡುತ್ತಿರುವ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಬೈರತಿ, ಅವರಿಗೆ ಮಾಡಲು ಬೇರೆ ಕೆಲಸವಿಲ್ಲ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾತುಗಳನ್ನು ಆಡುತ್ತಿದ್ದಾರೆ. ಏನಾದರೂ ಮಾಡಿ ಜನರ ದಿಕ್ಕನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬೆಳಗಾವಿ ಮತದಾರ ಮನದಲ್ಲಿ ನಮ್ಮ ಪಕ್ಷದ ಸುರೇಶ್ ಅಂಗಡಿಯವರು ಮಾಡುವ ಜನಪರ ಯೋಜನೆಗಳಿವೆ. ಅಲ್ಲದೆ ಡಿಕೆ ಶಿವಕುಮಾರ್‍ರವರು ಆಡುತ್ತಿರುವ ವ್ಯಂಗ್ಯದ ಬಗ್ಗೆ ರಮೇಶ್ ಜಾರಕಿಹೊಳಿಯವರಿಗೆ ಯಾವುದೇ ನೋವಿಲ್ಲ. ಅವರು ಹೇಗಿರಬೇಕು ಹಾಗೇ ಇದ್ದಾರೆ. ಅವರ ಎಲ್ಲಾ ಮಾತುಗಳಿಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ. ದೇವರು ಅವರಿಗೆ ನಿಭಾಯಿಸುವಂತಹ ಶಕ್ತಿ ನೀಡಿದ್ದಾನೆ. ಖಂಡಿತವಾಗಿ ನಿಭಾಯಿಸುತ್ತಾರೆ ಎಂದರು.

ಗೋಕಾಕ್ ಟಿಎಚ್‍ಓ ಸ್ಪಷ್ಟನೆ:
ರಮೇಶ್ ಜಾರಕಿ ಹೊಳಿಗೆ ಕೊರೊನಾ ಪಾಸಿಟಿವ್ ವಿಚಾರವಾಗಿ ಟಿ ಎಚ್ ಓ ರವೀಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ರಾತ್ರಿ ಗೋಕಾಕ್ ತಾಲೂಕು ಆಸ್ಪತೆಗೆ ಚಿಕಿತ್ಸೆಗಾಗಿ ರಮೇಶ್ ಜಾರಕಿಹೊಳಿ ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *