ಯುವಕನನ್ನು ಅಟ್ಟಾಡಿಸಿ ಕಲ್ಲಿನಿಂದ ಜಜ್ಜಿ ಕೊಲೆ

Public TV
1 Min Read

ಬಳ್ಳಾರಿ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಅಟ್ಟಿಸಿಕೊಂಡು ಕಲ್ಲಿನಿಂದ ಜೆಜ್ಜಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೊಸಪೇಟೆ ನಗರದ ಮೈಕಲ್ ಜಾನ್ ಎಂದು ಗುರುತಿಸಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೈಕಲ್ ಜಾನ್ ಕೇಬಲ್ ಆಪರೇಟರಾಗಿ ಕೆಲಸ ಮಾಡುತಿದ್ದನು.

ತಡ ರಾತ್ರಿ ಹೊಸಪೇಟೆಯ ಟಿಬಿ ಡ್ಯಾಂ ಬಳಿಯ ಫ್ಲೈಓವರ್ ಕೆಳಗಡೆ ಮೈಕಲ್ ಜಾನ್‍ನನ್ನು ಕರೆಸಿ ಅಟ್ಟಿಸಿಕೊಂಡು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಕರೆತಂದು ಪರೀಶಿಲನೆ ಮಾಡಲಾಗಿದೆ. ಈ ಸಂಬಂಧ ಟಿಬಿ ಡ್ಯಾಂ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *