ಯುಪಿಎ Vs ಎನ್‌ಡಿಎ , ಎಂಎಸ್‌ಪಿ ಮತ್ತಷ್ಟು ಹೆಚ್ಚಳ – ಬಜೆಟ್‌ನಲ್ಲಿ ಕೃಷಿಗೆ ಸಿಕ್ಕಿದ್ದು ಏನು?

Public TV
2 Min Read

ನವದೆಹಲಿ: ಕೃಷಿ ಕಾಯ್ದೆ ರದ್ದತಿಗೆ ಪಟ್ಟು ಹಿಡಿದಿರುವ ರೈತರ ಬೇಡಿಕೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿ ವಿಚಾರವೂ ಒಂದು. ಎಲ್ಲಾ ಕಡೆ ಎಂಎಸ್‌ಪಿ ರದ್ದು ಮಾಡಲಾಗುತ್ತದೆ ಎಂಬ ಗುಲ್ಲೆದ್ದಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಎಂಎಸ್‌ಪಿ ರದ್ದು ಮಾಡುವುದಿಲ್ಲ. ಎಂಎಸ್‌ಪಿ ಜಾಸ್ತಿ ಮಾಡುತ್ತೇವೆ. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಇಂದಿನ ಬಜೆಟ್ ಮೂಲಕ ಮತ್ತೊಮ್ಮೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಕನಿಷ್ಠ ಬೆಂಬಲ ಬೆಲೆ ನಿಲ್ಲಿಲ್ಲ. ಖರೀದಿ ಪ್ರಕ್ರಿಯೆ ಮುಂದುವರೆದಿದೆ. ಎಂಎಸ್‍ಪಿಗೆ ವೆಚ್ಚ ಮಾಡುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂಬುದನ್ನು

ಗೋಧಿ ಎಂಎಸ್‍ಪಿ:
2013-14 – 33,874 ಕೋಟಿ ರೂ., 2019-20 – 62,804 ಕೋಟಿ ರೂ., 2020-21 – 75,050 ಕೋಟಿ ರೂ. ಏರಿಕೆ ಮಾಡಲಾಗಿದೆ. 2013-14ಕ್ಕೆ ಹೋಲಿಸಿದರೆ ಎಂಎಸ್‍ಪಿ ಒಂದೂವರೆ ಪಟ್ಟು ಹೆಚ್ಚಳ ಮಾಡಿದ್ದು ಇದರಿಂದ 43.36 ಲಕ್ಷ ರೈತರಿಗೆ ಅನುಕೂಲವಾಗಿದೆ.

ಭತ್ತ ಎಂಎಸ್‍ಪಿ:
2013-14 – 53,928 ಕೋಟಿ ರೂ., 2019-20 – 1,41 ಲಕ್ಷ ಕೋಟಿ ರೂ. 2020-21 – 1,72,752 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ 1.54 ಕೋಟಿ ರೈತರಿಗೆ ಲಾಭವಾಗಿದ್ದು 2013ಕ್ಕೆ ಹೋಲಿಸಿದರೆ ಶೇ.40ರಷ್ಟು ಹೆಚ್ಚಳವಾಗಿದೆ.

ಇಡೀ ಕೃಷಿ ವಲಯಕ್ಕೆ ಮೋದಿ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಅದು ಎಪಿಎಂಸಿ ಆಗಿರಬಹುದು. ಕೃಷಿ ಉತ್ಪನ್ನಗಳ ಸಾಗಣೆ ವಿಚಾರ ಆಗಿರಬಹುದು. ರೈತರ ಹಲವು ಅನುಮಾನಗಳಿಗೆ ಇಲ್ಲಿ ತೆರೆ ಎಳೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.

ಕೃಷಿ ವಲಯಕ್ಕೆ ಏನೇನು..?
* ಕೃಷಿ ಸಾಲಕ್ಕಾಗಿ 16.5 ಲಕ್ಷ ಕೋಟಿ ಮೀಸಲು
* ಎಪಿಎಂಸಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತ್ತು/ ಎಪಿಎಂಸಿ ಸುಧಾರಣೆ
* ಕೃಷಿ ಕಾಯ್ದೆಗಳಿಂದ ಎಪಿಎಂಸಿ ಇಲ್ಲವಾಗುತ್ತೆ ಎಂಬ ವದಂತಿಗೆ ತೆರೆ
* 1000 ಮಂಡಿಗಳಲ್ಲಿ ಇ-ನ್ಯಾಮ್ ವ್ಯವಸ್ಥೆ
* 22 ಉತ್ಪನ್ನಗಳಿಗೆ ಆಪರೇಷನ್ ಗ್ರೀನ್ ಸ್ಕೀಮ್
* ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವಾಮಿತ್ವ ಯೋಜನೆ
* ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆ
* ಕೃಷಿಕರ ತುರ್ತು ಕೆಲಸಗಳಿಗಾಗಿ ಬಂಡವಾಳ
* ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ
* ಅಗತ್ಯ ವಸ್ತುಗಳ ಕಾಯ್ದೆಯಲ್ಲಿ ಹಲವು ತಿದ್ದುಪಡಿ
* ಚೆನ್ನೈ-ಕೊಚ್ಚಿ-ಪಾರಾದೀಪ್ ಸೇರಿ ಐದು ಮೀನುಗಾರಿಕಾ ಬಂದರುಗಳನ್ನು ಆರ್ಥಿಕ ಕೇಂದ್ರಗಳಾಗಿ ಅಭಿವೃದ್ಧಿ
* ತಮಿಳುನಾಡಿನಲ್ಲಿ ಸಮುದ್ರ ಕಳೆ ಕೃಷಿಗಾಗಿ ಸೀ ವಿಡ್ ಪಾರ್ಕ್

 

ಅನುದಾನ ಕಡಿತ:
ಕಳೆದ ಬಾರಿಗೆ ಹೋಲಿಸಿದರೆ ಕೃಷಿ ವಲಯಕ್ಕೆ ಈ ಬಾರಿ ಶೇ.6ರಷ್ಟು ಅನುದಾನ ಕಡಿತವಾಗಿದೆ. 1,54,775 ಕೋಟಿಯಿಂದ 1,48,301 ಕೋಟಿ ರೂ.ಗೆ ಅನುದಾನ ಇಳಿಕೆಯಾಗಿದೆ. ರೈತರ ಖಾತೆಗಳಿಗೆ ಹಣ ಹಾಕುವ ಕಿಸಾನ್ ಸಮ್ಮಾನ್‌ ಯೋಜನೆಗೆ ಶೇ.13ರಷ್ಟು ಅನುದಾನ ಕಡಿತ ವಾಗಿದೆ. 75 ಸಾವಿರ ಕೋಟಿಯಿಂದ 65 ಸಾವಿರ ಕೋಟಿ ರೂ.ಗೆ ಅನುದಾನ ಇಳಿಕೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *