ಯಾವ ಪಿಕ್ಚರ್, ರೀಲು ಇಲ್ಲ: ಸಚಿವ ಆನಂದ್ ಸಿಂಗ್‍ಗೆ ಎಸ್‍ಟಿಎಸ್ ಟಾಂಗ್

Public TV
1 Min Read

ಚಾಮರಾಜನಗರ: ಸಚಿವ ಸ್ಥಾನದ ಬಗ್ಗೆ ಅಸಮಧಾನಗೊಂಡು ಪಿಕ್ಚರ್ ಅಬಿ ಬಾಕಿ ಹೈ ಎಂದು ಹೇಳಿರುವ ಸಚಿವ ಆನಂದ್ ಸಿಂಗ್ ಗೆ ಯಾವ ಪಿಕ್ಚರ್ರು ಇಲ್ಲ, ಯಾವ ರೀಲು ಇಲ್ಲಾ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದಲ್ಲಿ ಮಾತನಾಡಿದ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಿಗೆ ಇದೆ. ಏನೇ ಅಸಮಾಧಾನ ಇದ್ದರೂ ಸಿಎಂ ಜೊತೆ ಕುಳಿತು ಮಾತನಾಡಬೇಕೇ ಹೊರತು, ಹೊರಗೆ ನಿಂತು ಮಾತನಾಡಿದ್ರೆ ಪ್ರಯೋಜನವಿಲ್ಲ ಎಂದು ಅವರು ಆನಂದ್ ಸಿಂಗ್ ಗೆ ಪರೋಕ್ಷವಾಗಿ ಸಚಿವ ಎಸ್.ಟಿ ಸೋಮಶೇಖರ್ ಸಲಹೆ ನೀಡಿದರು.

ಬೊಮ್ಮಾಯಿ ಅವರಿಗೆ ಕ್ಲೀನ್ ಇಮೇಜ್ ಸರ್ಕಾರ ಕೊಡಬೇಕಬೇಕೆಂಬ ಕನಸಿದೆ. ಕಾಂಗ್ರೆಸ್ ನವರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ತಿರುಗೇಟು ನೀಡಿದ ಅವರು ಬೊಮ್ಮಾಯಿ ಸಿಎಂ ಆದ ಮೇಲೆ ಕಾಂಗ್ರೆಸ್ ನವರಿಗೆ ನಡುಕ ಉಂಟಾಗಿದೆ. ಬೊಮ್ಮಾಯಿ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರ ಅವಧಿ ಪೂರೈಸುತ್ತೆ ಎಂದರು. ಇದನ್ನೂ ಓದಿ: ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಲಿಂಬಾವಳಿ ಬೆದರಿಕೆ ಆರೋಪ!

ಆನಂದ್ ಸಿಂಗ್ ಹೇಳಿದ್ದೇನು?:
ಹೊಸದಾಗಿ ರಚನೆ ಆಗಿರುವ ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸಚಿವ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಖಾತೆ ಮತ್ತು ರಾಜೀನಾಮೆ ವಿಚಾರವಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೈ ಅಂದಿದ್ದಾರೆ. ಬೆಂಗಳೂರಿಗೆ ನಾನಿನ್ನೂ ಹೋಗಿಲ್ಲ. ಹೋದ ಮೇಲೆ ಮುಂದಿನ ಮಾತು. ಇಲಾಖೆ ಚಾರ್ಜ್ ತೆಗೆದುಕೊಳ್ಳದೇ ಇದ್ರೇ ಏನು ಅಗಲ್ಲ. ಸದ್ಯಕ್ಕೆ ಬೆಂಗಳೂರಿಗೆ ಹೋಗೋ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

Share This Article
Leave a Comment

Leave a Reply

Your email address will not be published. Required fields are marked *