ಮೋದಿಯಿಂದಾಗಿ ಯೋಗಕ್ಕೆ ವಿಶ್ವಮನ್ನಣೆ – ಕರಂದ್ಲಾಜೆ

Public TV
1 Min Read

ಉಡುಪಿ: ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಯ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಯೋಗ ದಿನದ ಅಂಗವಾಗಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆಯಿಂದ ಯೋಗಭ್ಯಾಸ ಮಾಡಿದ್ದಾರೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಕಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗಿದ್ದು, ವೈದ್ಯರೊಂದಿಗೆ ಯೋಗಾಸನದಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಒಂದು ಮಾಡಿದ ಅಭಿಯಾನ -ರಘುಪತಿ ಭಟ್, ಪ್ರಮೋದ್‍ರಿಂದ ಹಡಿಲು ಗದ್ದೆ ಬೇಸಾಯ

ಸುಮಾರು ಒಂದು ಗಂಟೆ ಯೋಗ, ಪ್ರಾಣಾಯಾಮದಲ್ಲಿ ಶೋಭಾ ಕರಂದ್ಲಾಜೆ ತಲ್ಲೀನರಾದರು. ಆಯುಷ್ ಇಲಾಖೆ ಆನ್ಲೈನ್ ಮೂಲಕ ತಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಉಚಿತ ಯೋಗ ಶಿಬಿರವನ್ನು ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಯುಷ್ ವೈದ್ಯರು, ಆಸ್ಪತ್ರೆ ಸಿಬ್ಬಂದಿಯ ಜೊತೆ ಯೋಗಾಸನದ ವಿವಿಧ ಭಂಗಿಗಳನ್ನು ಮಾಡಿದರು.

ಯೋಗಭ್ಯಾಸದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಔಷಧಿ ಮಾತ್ರೆಗಳ ಹಿಂದೆ ಹೋಗಿ ನಾವೆಲ್ಲಾ ಯೋಗ ಮರೆತೆವು. ಆಧುನಿಕ ಔಷಧಿಯಿಂದ ಹಲವಾರು ಅಡ್ಡಪರಿಣಾಮಗಳು ಇವೆ. ನಮ್ಮ ದೇಶಕ್ಕೆ ಇದರಿಂದ ಹಲವು ಸಮಸ್ಯೆ ಆಗಿವೆ. ಯೋಗ ಮನಸ್ಸು ಆತ್ಮವನ್ನು ಜೋಡಿಸುವ ಒಂದು ಕಲೆ. ಪ್ರಧಾನಿ ಮೋದಿಯಿಂದ ಯೋಗ ವಿಶ್ವಕ್ಕೆ ಪುನರಪಿ ಪರಿಚಯವಾಗಿ ಭಾರೀ ಜನಮನ್ನಣೆ ಪಡೆಯಿತು ಎಂದರು.

ಕೋಟ್ಯಂತರ ಜನ ಭಾರತದ ಯೋಗಕ್ಕೆ ಮಾರುಹೋಗಿದ್ದಾರೆ. ಪ್ರಪಂಚದಾದ್ಯಂತ ಎಲ್ಲಾ ದೇಶಗಳ ಜನ ಯೋಗ ಅಭ್ಯಾಸ ಮಾಡಿ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಯೋಗ ಅಧ್ಯಯನಕ್ಕೆ ಯೋಗ ಅಭ್ಯಾಸಕ್ಕೆ ಲಕ್ಷಾಂತರ ವಿದೇಶಿಗರು ಭಾರತಕ್ಕೆ ಬರುತ್ತಿದ್ದಾರೆ. ಕೊರೊನಾ ಕಾಲದಲ್ಲಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಯೋಗ ಪ್ರಯೋಜನಕಾರಿಯಾಗಿದೆ. ಯೋಗಾಭ್ಯಾಸ ಯೋಗ ದಿನಕ್ಕೆ ಮಾತ್ರ ಸಿಮಿತವಾಗುವುದು ಬೇಡ. ಪ್ರತಿದಿನ ಯೋಗಾಭ್ಯಾಸ ಮಾಡಿ. ಕೊರೊನಾ ಕಾಲದಲ್ಲಿ ಯೋಗಾಭ್ಯಾಸ ಮಾಡುವವರ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಕಲಿತ ವಿದ್ಯೆ, ಪಾಠ ಜೀವನದುದ್ದಕ್ಕೂ ಮುಂದುವರೆಯ ಬೇಕು ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *