ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು – ಕಲಾವಿದನ ಕಲೆಗೆ ನೆಟ್ಟಿಗರು ಫಿದಾ

Public TV
2 Min Read

ಬೆಂಗಳೂರು: ಇತ್ತೀಚೆಗಷ್ಟೆ ಮೇಘನಾ ರಾಜ್ ಸೀಮಂತ ಕಾರ್ಯಕ್ರಮ ಸಾಂಪ್ರದಾಯಕವಾಗಿ ನಡೆದಿದೆ. ಚಿರಂಜೀವಿ ಅಗಲಿಕೆಯ ನೋವಿನಲ್ಲಿದ್ದ ಸರ್ಜಾ ಕುಟುಂಬ ಮೇಘನಾ ಸೀಮಂತ ಮಾಡುವ ಮೂಲಕ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

ಸೀಮಂತದಲ್ಲಿ ಚಿರು ಇಲ್ಲ ಎಂಬ ನೋವು ಎಲ್ಲರಿಗೂ ಕಾಡಿತ್ತು. ಆದರೂ ಮೇಘನಾ ಸೀಮಂತ ಕಾರ್ಯಕ್ರಮದಲ್ಲಿ ಚಿರುವಿನ ದೊಡ್ಡ ಪೋಸ್ಟರ್‌ವೊಂದನ್ನು ಇಡಲಾಗಿತ್ತು. ಚಿರು ಫೋಟೋ ಮುಂದೆಯೇ ಮೇಘನಾ ಚೇರ್ ಮೇಲೆ ಕುಳಿತುಕೊಂಡಿದ್ದು, ಅವರಿಗೆ ಸೀಮಂತ ಶಾಸ್ತ್ರ ಮಾಡಲಾಗಿತ್ತು. ಇದೇ ವೇಳೆ ಮೇಘನಾ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು.

ಇದೀಗ ಮೇಘನಾ ಸೀಮಂತ್ ಫೋಟೋಗಳ ಪೈಕಿ ಅರಳಿದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘನಾ ಅವರು ಒಬ್ಬರೇ ನಿಂತುಕೊಂಡು ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದರು. ಆ ಫೋಟೋಗೆ ಕಲಾವಿದ ಕರಣ್ ಆಚಾರ್ಯ ಜೀವ ನೀಡಿದ್ದಾರೆ. ಅಂದರೆ ಆ ಫೋಟೋವನ್ನು ಎಡಿಟ್ ಮಾಡಲಾಗಿದೆ.

ಸಾಮಾನ್ಯವಾಗಿ ಸೀಮಂತ ಸಮಯದಲ್ಲಿ ಪತಿ ಜೊತೆಯಲ್ಲಿರಬೇಕು ಎಂದು ಪ್ರತಿಯೊಬ್ಬ ಪತ್ನಿಯೂ ಇಷ್ಟಪಡುತ್ತಾಳೆ. ಆದರೆ ಮೇಘನಾ ವಿಚಾರದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಕಲಾವಿದ ಕರಣ್ ಆಚಾರ್ಯ ಫೋಟೋ ಮೂಲಕ ಆ ಆಸೆಯನ್ನು ನೆರವೇರಿಸಿದ್ದಾರೆ. ಅಭಿಮಾನಿಯೊಬ್ಬರು ಮೇಘನಾರ ಒಂಟಿ ಫೋಟೋವನ್ನು ಪೋಸ್ಟ್ ಮಾಡಿ ಈ ಫೋಟೋಗೆ ಜೀವ ತುಂಬಿ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಕಲಾವಿದ ಕರಣ್ ಅದರಂತೆಯೇ ಮೇಘನಾ ಕೈ ಹಿಡಿದು ಚಿರು ಹೆಜ್ಜೆ ಹಾಕುತ್ತಿರುವ ರೀತಿ ಎಡಿಟ್ ಮಾಡಿದ್ದಾರೆ. ಚಿರುವಿನ ಮದುವೆ ಸಂದರ್ಭದಲ್ಲಿ ತೆಗೆದಿದ್ದ ಫೋಟೋವನ್ನು ಮೇಘನಾ ಫೋಟೋ ಜೊತೆ ಎಡಿಟ್ ಮಾಡಿದ್ದಾರೆ. ಕಲಾವಿದ ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದು, ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

https://www.instagram.com/p/CF-DrP7HJbU/?igshid=b1htolkc11th

ಇದೇ ರೀತಿ ಇನ್ನೂ ಕೆಲ ಫೋಟೋಗಳನ್ನ ಎಡಿಟ್ ಮಾಡಲಾಗಿದೆ. ಅದರಲ್ಲೂ ಮೇಘನಾ ಜೊತೆ ಚಿರು ನಿಂತಿರುವ ರೀತಿ ಕಾಣಬಹುದಾಗಿದೆ. ಮೊದಲಿಗೆ ಭಾನುವಾರ ಮನೆಯಲ್ಲಿಯೇ ಸರಳವಾಗಿ ಮೇಘನಾ ರಾಜ್ ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ. ಮತ್ತೆ ಸೋಮವಾರ ರಾತ್ರಿ ಅದ್ಧೂರಿಯಾಗಿ ಮೇಘನಾ ರಾಜ್ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *