ಮುರಾಘಾಶ್ರೀ ವೀರಶೈವ ಲಿಂಗಾಯತ ವೆಬ್‍ಸೈಟ್‍ಗೆ ವಿರೋಧ: ಬಸವ ಕೇಂದ್ರದಿಂದ ಅಸಮಧಾನ

Public TV
1 Min Read

ರಾಯಚೂರು: ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿಮುರುಘಾ ಶರಣರಿಂದ ಆರಂಭವಾದ ವೀರಶೈವ ಲಿಂಗಾಯತ ವೆಬ್ ಸೈಟ್‍ಗೆ ರಾಯಚೂರಿನ ಬಸವ ಕೇಂದ್ರದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಲಿಂಗಾಯತರೇ ಬೇರೆ ವೀರಶೈವರೇ ಬೇರೆ. ಇಬ್ಬರೂ ಒಂದೇ ಅನ್ನೋ ರೀತಿಯಲ್ಲಿ ಒಟ್ಟಾಗಿ ವೆಬ್‍ಸೈಟ್ ಬಿಡುಗಡೆ ಮಾಡಿರುವುದರು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ, ನಿರಂತರವಾಗಿ ನಡೆದಿದೆ. ಬಸವ ತತ್ವಕ್ಕೆ ಬದ್ಧವಾಗಿರುವವರು ಲಿಂಗಾಯತರು. ಮುರುಘಾಶ್ರೀಗಳು ಲಿಂಗಾಯತರು, ವೀರಶೈವರು ಒಂದೇ ಎನ್ನುವಂತ ವೆಬ್ ಸೈಟ್ ಆರಂಭಿಸಬಾರದಿತ್ತು ಅಂತ ಬಸವ ಕೇಂದ್ರದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ವಪ್ರತಿಷ್ಠೆಗಾಗಿ ವೆಬ್ ಸೈಟ್ ಆರಂಭಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ ಅಂತ ಬಸವ ಕೇಂದ್ರದ ಸದಸ್ಯರು ಹೇಳಿದ್ದಾರೆ. ಜಿಲ್ಲಾ ಬಸವಕೇಂದ್ರದ ಅಧ್ಯಕ್ಷ ಕುರಕುಂದಿ ವೀರಭದ್ರಪ್ಪ, ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶಟ್ಟಿ ,ಹಿರಿಯ ಸದಸ್ಯ ಬಸವರಾಜದೇವರು ಅರಿವಿನಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

Share This Article
Leave a Comment

Leave a Reply

Your email address will not be published. Required fields are marked *