ಮುತ್ತು ಕೊಟ್ಟರೆ ತುಟಿ ಸುಡುತ್ತೆ – ಸರ್ಕಾರದ ಬಗ್ಗೆಯೇ ಬಿಜೆಪಿಯ ದೊಡ್ಡನಗೌಡ ವ್ಯಂಗ್ಯ

Public TV
1 Min Read

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ನೇಕಾರರ ಸಮಸ್ಯೆ ವಿಷಯ ಪ್ರಸ್ತಾಪಿಸಿದ ಹುನಗುಂದ ಬಿಜೆಪಿ ಶಾಸಕ ದೊಡ್ಡನಗೌಡ ನಮ್ಮ ಹತ್ತಿರ ದೀಪ ಇದೆ ಎಂದು ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುತ್ತದೆ ಎಂದು ತಮ್ಮದೇ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಈ ಬಾರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ಕುರಿತು ಚರ್ಚೆಯಾಗುತ್ತಿತ್ತು. ಈ ಸಂದರ್ಭ ಮಾತನಾಡಿದ ದೊಡ್ಡನಗೌಡ, ನೇಕಾರರು ಸಿದ್ಧಪಡಿಸಿದ ಸೀರೆಗಳ ಖರೀದಿ ಆಗುತ್ತಿಲ್ಲ. ಅಧಿಕಾರಿಗಳು ಏನೂ ಸಹಾಯ ಮಾಡುವ ರೀತಿ ಕಾಣಿಸುತ್ತಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಉಪಸಭಾಧ್ಯಕ್ಷ ಆನಂದ್ ಮಾಮನಿ, ನೀವು ಆಡಳಿತ ಪಕ್ಷದವರ ರೀತಿ ಮಾತನಾಡುತ್ತಿಲ್ಲ. ವಿರೋಧ ಪಕ್ಷದವರಿಗೆ ಮಾತನಾಡಲು ವಸ್ತು ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದೀರಿ ಎಂದರು.

ಆನಂದ್ ಮಾಮನಿಯವರ ಮಾತಿಗೆ ದೊಡ್ಡನಗೌಡ, ದೀಪದ ಕೆಳಗೆ ಇದ್ದೇವೆ. ನಮ್ಮದೇ ಸರ್ಕಾರ ಇದೆ. ದೀಪ ನಮ್ಮದೇ, ನಮ್ಮ ಹತ್ತಿರ ದೀಪ ಇದೆ ಎಂದು ಮುತ್ತು ಕೊಡೋದಕ್ಕೆ ಆಗುತ್ತಾ? ಮುತ್ತು ಕೊಟ್ಟರೆ ನಮ್ಮ ತುಟಿ ಸುಡುವುದಿಲ್ಲವೇ ಎಂದು ಪಶ್ನಿಸಿ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *