ಮಾನವಂತರ‌್ಯಾರು ರಾಜಕಾರಣ ಮಾಡಬಾರದಾ?- ನಿವೃತ್ತಿ ಸುದ್ದಿಗೆ ರಮೇಶ್‍ ಕುಮಾರ್ ಸ್ಪಷ್ಟನೆ

Public TV
1 Min Read

ಕೋಲಾರ: ಮಾನವಂತರು ಯಾರು ರಾಜಕಾರಣ ಮಾಡಬಾರದಾ ಎಂದು ಪ್ರಶ್ನಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ನಿವೃತ್ತಿ ಸುದ್ದಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಕುಮಾರ್, ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ವಿಷಯ ಹರಿದಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಸಭೆ ಸಮಾರಂಭ ಮಾಡಿ ಹೇಳಿಲ್ಲ. ಹೀಗಿರುವಾಗ ದಾಖಲೆಗಳಿಲ್ಲದೆ ಈ ರೀತಿ ವದ್ದಂತಿ ಹಬ್ಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.

ಜನರು ಎಲ್ಲಾ ನನ್ನ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟು ಅಮೇಲೆ ನಿವೃತ್ತಿಯಾಗುವೆ. ಏಕಾಏಕಿ ನಿವೃತ್ತಿಯಾಗಲು ನಾನು ಸರ್ವಾಧಿಕಾರಿ ಅಲ್ಲ. ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ. ಜನರ ಪ್ರೀತಿಯ ಬಂಧನದಲ್ಲಿದ್ದೇನೆ. ಮಾನವಂತರು ಯಾರೂ ರಾಜಕಾರಣ ಮಾಡಬಾರದಾ?. ಹೀಗೆ ಮಾಡಿದ್ರೆ ಮನಸ್ಸಿಗೆ ನೋವಾಗುತ್ತೆ ಎಂದರು.

ನಾನು ದೇವರಾಜ ಅರಸು ಕಾಲದಿಂದ ರಾಜಕೀಯದಲ್ಲಿ ಸಕ್ರಿಯನಾಗುದ್ದು, ಗೌರವವಾಗಿ ಬದುಕುತ್ತಿದ್ದೇನೆ. ನಾನು ಸರ್ಕಾರಿ ಸೇವೆಯಲ್ಲಿದ್ರೆ ವಿಅರ್ ಎಸ್ ಕೊಡಬಹುದು. ಆದ್ರೆ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ನಾನು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ನಿವೃತ್ತಿ ಸುದ್ದಿಯನ್ನ ಅಲ್ಲಗಳೆದರು.

Share This Article
Leave a Comment

Leave a Reply

Your email address will not be published. Required fields are marked *