ಮಾತಾಡಲೂ ಸಾಧ್ಯವಾಗದ ಪ್ರೇಮಿಗಳು – ವಿಷ ಕುಡಿದ ಯುವಕ

Public TV
1 Min Read

– ಎರಡು ಕುಟುಂಬದ ನಡುವೆ ಮನಸ್ತಾಪ
– ಸಾವು, ಬದುಕಿನ ಮಧ್ಯೆ ಪ್ರಿಯತಮ ಹೋರಾಟ

ದಾವಣಗೆರೆ: ಯುವತಿಯ ಮನೆಯವರು ಹಲ್ಲೆ ಮಾಡಿದರೂ ಎಂದು ಮನನೊಂದು ಯುವಕನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ದಾವಣಗೆರೆಯ ಎಸ್‍ಒಜಿ ಕಾಲೋನಿಯ ನಿವಾಸಿ ಮನ್ಸೂರ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಯುವಕ. ಮನ್ಸೂರ್ ಕೆಲ ಎಜೆಸ್ಸಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದನು. ಅದೇ ಏರಿಯಾದಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯ ಮಗಳನ್ನು ಪ್ರೀತಿಸುತ್ತಿದ್ದನು. ಕಳೆದ ಐದಾರು ವರ್ಷಗಳಿಂದ ಎರಡು ಕುಟುಂಬಕ್ಕೆ ಸಂಬಂಧವಿದ್ದು, ಆ ಸಂಬಂಧದಿಂದಲೇ ಇಬ್ಬರು ಮೂರು ವರ್ಷಗಳಿಂದ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು.

ಕೆಲ ದಿನಗಳ ಹಿಂದೆ ಎರಡು ಕುಟುಂಬದ ನಡುವೆ ಮನಸ್ತಾಪ ಉಂಟಾಗಿದೆ. ಈ ವೇಳೆ ಪ್ರೇಮಿಗಳು ಮಾತನಾಡುವುದು ಕೂಡ ಕಷ್ಟವಾಗಿತ್ತು. ಅಲ್ಲದೆ ತನ್ನ ಮಗಳನ್ನು ಯಾವುದೇ ಕಾರಣಕ್ಕೂ ಮಾತನಾಡಿಸುವುದಾಗಲಿ, ಭೇಟಿಯಾಗುವುದಾಗಿ ಮಾತನಾಡುವಂತಿಲ್ಲ ಎಂದು ಯುವತಿಯ ಕಡೆಯವರು ಎಚ್ಚರಿಕೆಯನ್ನು ನೀಡಿದ್ದರು. ಇದರಿಂದ ಮನನೊಂದು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾನೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

ವಿಷ ಕುಡಿಯುವುದಕ್ಕಿಂತ ಎರಡು ದಿನಗಳ ಹಿಂದೆ ಯುವತಿಯ ತಂದೆ ಹಾಗೂ ಸೋದರ ಮಾವ ಇಬ್ಬರು ಮನ್ಸೂರ್‌ನನ್ನು ಕಾಲೋನಿಯ ಪಕ್ಕದಲ್ಲಿರುವ ಭದ್ರ ಚಾನಲ್ ಬಳಿ ಕರೆಸಿ ಹೊಡೆದು ಕಳಿಸಿದ್ದರು. ಇದರಿಂದ ಮನನೊಂದು ವಿಷ ಕುಡಿದಿದ್ದಾನೆ. ಅಲ್ಲದೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಪೊಲೀಸರು ಯುವತಿಯ ಕಡೆಯವರನ್ನು ವಿಚಾರಣೆ ನಡೆಸುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿರುವ ಮನ್ಸೂರ್ ಮೇಲೆ ಈಗ ಮಹಿಳಾ ಠಾಣೆಯಲ್ಲಿ ಯುವತಿ ಮನೆ ಕಡೆಯವರು ದೂರು ನೀಡಿದ್ದಾರೆ. ತನಿಖೆ ನಡೆಸಲಿ ತಪ್ಪು ಯಾರದ್ದು ಇದೆಯೋ ಅವರಿಗೆ ಶಿಕ್ಷೆಯಾಗಲಿ. ಆದರೆ ಅವರಿಗಿಂತ ಮೊದಲು ನಾವು ದೂರು ನೀಡಿದರು ತನಿಖೆ ನಡೆಸಲಿಲ್ಲ. ಆದರೆ ಈಗ ಮಹಿಳಾ ಠಾಣೆಯಲ್ಲಿ ದೂರು ನೀಡಿದ ತಕ್ಷಣ ಪೊಲೀಸರು ಪದೇ ಪದೇ ಕರೆ ಮಾಡುತ್ತಿದ್ದಾರೆ ಎಂದು ಮನ್ಸೂರ್ ಸಹೋದರಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *