ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ: ನಟ ಜಗ್ಗೇಶ್

Public TV
1 Min Read

ಬೆಂಗಳೂರು: ನಟ ಕೋಮಲ್ ಬಳಿಕ ಜಗ್ಗೇಶ್‍ರವರ ಬಾವಮೈದುನನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಬಾವಮೈದುನನಿಗೆ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ನಟ ಜಗ್ಗೇಶ್ ಹರಸಾಹಸ ಪಟ್ಟಿದ್ದಾರೆ. ಈ ಕುರಿತಾದ ಅನುಭವವನ್ನು ಟ್ವೀಟ್ ಮಾಡುವಾಗ ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ಬರೆದಿದ್ದಾರೆ.

23 ಜನರ ಕೊರೊನಾ ರಕ್ಷಣೆಗೆ ಮನೆಯ ಹಿರಿಯನಾಗಿ ಹೋರಾಡಿ ಸಾಕಪ್ಪಾ ದೇವರೇ.. ಎನ್ನುವಷ್ಟರಲ್ಲಿ ನನ್ನ ಬಾವಮೈದುನ ಸೀರಿಯಸ್ ಆದ ಸುದ್ದಿ ಬಂತು. ರಾತ್ರಿ 11ಕ್ಕೆ. ಸರಿ ರಾತ್ರಿ ಅವನ ಕ್ಷೇಮದ ಜಾಗಕ್ಕೆ ಓಡಾಟ. ರಾಯರ ದಯೇ.. ನಾರಾಯಣ ಆಸ್ಪತ್ರೆಯಲ್ಲಿ ಕರುಣೆ ತೋರಿದರು. ಧನ್ಯವಾದ. ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ತಮ್ಮ ಸಹೋದರ, ನಟ ಕೋಮಲ್‍ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರ ಬಗ್ಗೆ ನಟ ಜಗ್ಗೇಶ್ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದರು. ರಾಯರು ಬೃಂದಾವನದಿಂದ ಎದ್ದು ಬಂದು ಪಕ್ಕ ನಿಂತು ಅವನನ್ನು ಉಳಿಸಿಬಿಟ್ಟರು ಕೋಮಲ್ ಈಗ ಸೇಫ್ ಎಂದು ಜಗ್ಗೇಶ್ ಹೇಳಿದ್ದರು.

ಕೊರೊನಾ ಸಂಕಷ್ಟಕ್ಕೆ ಮನೆಯಲ್ಲಿ ಒಬ್ಬರು ಸಿಲುಕಿದರೆ ಮನೆ ಮಂದಿಯೆಲ್ಲಾ ನರಕ ನೋಡುವಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಜಗ್ಗೇಶ್ ಬರೆದುಕೊಂಡಿದ್ದರು. ಇದೀಗ ಮನೆಗೆ ಹಿರಿಯನಾಗಿ ಹುಟ್ಟುವುದೇ ಕರ್ಮ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *