ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆ ಬೆಂಕಿ ಹಚ್ಚಿಕೊಂಡಳು!

Public TV
1 Min Read

– ಮಹಿಳೆಯ ಫೋಷಕರು ಹೇಳೋದೇನು..?

ಹೈದರಾಬಾದ್: ನವವಿವಾಹಿತೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಕುಪ್ಪಂ ಪ್ರದೇಶದಲ್ಲಿ ನಡೆದಿದೆ.

ಆತ್ಮಹತ್ಮೆ ಮಾಡಿಕೊಂಡಾಕೆಯನ್ನು ಚೈತನ್ಯ ಎಂದು ಗುರುತಿಸಲಾಗಿದೆ. ಈಕೆಗೆ ಅಕ್ಟೋಬರ್ 28ರಂದು ತಂಗವೇಲು ಎಂಬಾತನ ಜೊತೆ ವಿವಾಹವಾಗಿತ್ತು.

ವಿವಾಹದ ಒಂದೇ ತಿಂಗಳಲ್ಲಿ ಚೈತನ್ಯ ಆತ್ಮಹತ್ಯೆಗೆ ಶರಣಾಗಿರುವುದು ಆಕೆಯ ಕುಟುಂಬಸ್ಥರನ್ನು ಗಾಬರಿಗೊಳಿಸಿದೆ. ಅಲ್ಲದೆ ಗಂಡನ ಮನೆಯವರೇ ಕಾರಣ ಎಂದು ಆರೋಪಿ ತಂಗವೇಲು ಮನೆಗೆ ಚೈತನ್ಯ ಸಂಬಂಧಿಕರು ದಾಳಿ ಮಾಡಿದ್ದಾರೆ. ಮನೆಯ ಸಾಮಗ್ರಿಗಳನ್ನು ಪುಡಿಗೈದಿದ್ದಾರೆ.

ಮಗಳ ಸಾವಿನ ಹಿನ್ನೆಲೆಯಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಅಲ್ಲದೆ ಆಕೆಯ ಪತಿ ಮನೆಯವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಘಟನೆಯನ್ನರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಚೈತನ್ಯ ಸಂಬಂಧಿಕರನ್ನು ಸಮಾಧಾನಪಡಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *