ಮಂಡ್ಯದಲ್ಲಿ ಬಾಲಕನನ್ನು ಕೊಂಬಿನಿಂದ ತಿವಿದು ಕೊಂದ ಹಸು!

Public TV
1 Min Read

ಮಂಡ್ಯ: ಮನೆಯಲ್ಲಿ ಸಾಕಿ ಸಲಹಿದ್ದ ಹಸುವೊಂದು ಅದೇ ಮನೆಯ ಬಾಲಕನನ್ನು ಕೊಂದ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ.

ಮಾದೇಶ್ (13) ಮೃತ ದುರ್ದೈವಿ ಬಾಲಕ. ಈ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.

ಮಾದೇಶ್ ಎಂದಿನಂತೆ ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದನು. ಇದೇ ವೇಳೆ ಹಸು ಬಾಲಕನನ್ನು ತನ್ನ ಕೊಂಬಿನಿಂದ ತಿವಿದು ಗಂಭೀರ ಗಾಯಗೊಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮನೆಯಲ್ಲಿ ತಾನೇ ಸಾಕಿದ್ದ ಹಸು ಮುಂದೊಂದು ದಿನ ತನ್ನನ್ನೇ ಕೊಲ್ಲಬಹುದು ಎಂದು ಮನೆ ಮಂದಿ ಯೋಚನೆಯನ್ನು ಕೂಡ ಮಾಡಿರಲಿಲ್ಲ. ಇದೀಗ ಹಸುವಿನ ತಿವಿತಕ್ಕೆ ಮನೆ ಮಗ ಬಲಿಯಾಗಿರುವುದು ಇಡೀ ಕುಟುಂಬ ದುಃಖದ ಕಡಲಲ್ಲಿ ತೇಲುವಂತೆ ಮಾಡಿದೆ.

ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *