ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ರಾತ್ರಿ ಹೊತ್ತು ಬಿಟ್ಟರೆ ಹಗಲಿನಲ್ಲಿ ಸ್ಪರ್ಧಿಗಳು ನಿದ್ರೆ ಮಾಡುವಂತಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೂ ಮನಸ್ಸಿನಲ್ಲಿ ನಿದ್ದೆ ಮಾಡಬಾರದು ಅಂತ ಅಂದುಕೊಂಡರೂ ಕಣ್ಣುಗಳು ಮಾತು ಕೇಳಬೇಕಲ್ವಾ? ಆಗಾಗ ಕಣ್ಣುಗಳು ನಿದ್ರೆಗೆ ಜಾರಿಯೇ ಬಿಡುತ್ತದೆ. ಇನ್ನೂ ದೊಡ್ಮನೆಯಲ್ಲಿ ಸ್ಪರ್ಧಿಗಳು 5 ನಿಮಿಷ ನಿದ್ರೆಗೆ ಜಾರುವಂತಿಲ್ಲ, ಅಷ್ಟರಲ್ಲಿ ಎದ್ದೇಳು ಮಂಜುನಾಥ ಸಾಂಗ್ ಪ್ಲೇ ಮಾಡಿ ಬಿಗ್‍ಬಾಸ್ ಎದ್ದೇಳುವಂತೆ ಎಚ್ಚರಿಸುತ್ತಾರೆ. ಆದ್ರೆ ಈ ಬಾರಿ ನಿದ್ದೆ ಗುಂಗಲ್ಲಿ ಇದ್ದ ಮಂಜು ಹಾಗೂ ವೈಷ್ಣವಿಗೆ ಬಿಗ್‍ಬಾಸ್ ವಿಭಿನ್ನವಾಗಿ ಟ್ವಿಸ್ಟ್ ನೀಡುವ ಮೂಲಕ ನಿದ್ದೆ ಹೋಗಿಸಿದ್ದಾರೆ.

ಹೌದು, ನಿದ್ರೆ ಕಣ್ಣಿನಲ್ಲಿದ್ದ ಮಂಜುಗೆ ಬಿಗ್‍ಬಾಸ್ ಕರೆ ಮಾಡಿ, ನಿಮಗೆ ನಿದ್ದೆ ಬರುತ್ತಿದ್ಯಾ? ನಿಮಗೆ ಅಷ್ಟೇನಾ ಅಥವಾ ಇನ್ನೂ ಯಾರಿಗಾದರೂ ನಿದ್ರೆ ಬರುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಂಜು ನನಗೆ ಹಾಗೂ ವೈಷ್ಣವಿ, ಶುಭಾಗೆ ನಿದ್ರೆ ಬರುತ್ತಿದೆ ಎಂದಿದ್ದಾರೆ. ಇದಕ್ಕೆ ಬಿಗ್‍ಬಾಸ್ ನಿಮಗೆ ಹಾಗೂ ವೈಷ್ಣವಿಗೆ ನಿದ್ದೆ ಹೋಗಿಸಲು ಚಟುವಟಿಕೆ ನೀಡಲಾ ಎಂದು ಕೇಳಿದ್ದಾರೆ. ಅದಕ್ಕೆ ಮಂಜು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸ್ಟೋರ್ ರೂಮ್‍ನಲ್ಲಿ ಕೆಲವು ಚಟುವಟಿಕೆ ಸಾಮಾಗ್ರಿ ಹಾಗೂ ವಿವರಗಳನ್ನು ಕಳುಹಿಸಿಕೊಡುವುದಾಗಿ ಬಿಗ್‍ಬಾಸ್ ತಿಳಿಸಿದ್ದಾರೆ.

ಅದರಂತೆ ಸ್ಟೋರ್ ರೂಮ್‍ಗೆ ಹೋಗಿ ನೋಡಿದ ಮಂಜುಗೆ ಅಕ್ಕಿ ಹಾಗೂ ಜೀರಿಗೆ ಕಂಡಿದೆ. ಅದನ್ನು ಎತ್ತಿಕೊಂಡು ಬಂದ ಮಂಜು ಅಕ್ಕಿ ಹಾಗೂ ಜೀರಿಗೆ ಕೊಟ್ಟು ಬೇರೆ ಮಾಡಿ ಅಂತ ಹೇಳಿದ್ದಿರಲ್ಲ ಬಿಗ್‍ಬಾಸ್ ಎಂದು ಗೋಳಾಡಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಎದ್ದು ಬಿದ್ದು ನಗುತ್ತಾ, ಅಕ್ಕಿ ಮತ್ತು ಜೀರಿಗೆಯನ್ನು ಬೇರೆ, ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನಂತರ ಅಕ್ಕಿ ಹಾಗೂ ಜಿರಿಗೆ ಸೋಸುವುದಕ್ಕೆ ಕುಳಿತ ಮಂಜು ಸುಸ್ತಾಗಿ, ಒಳ್ಳೆ ಶಿಕ್ಷೆ ಕೊಟ್ರಿ ಬಿಗ್‍ಬಾಸ್, ಕತ್ತು ನೋವು ಬರುತ್ತಿದೆ, ಬಿಗ್‍ಬಾಸ್ ಸ್ವಲ್ಪ ಶಿಕ್ಷೆ ಕಡಿಮೆ ಮಾಡಿ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಬಿಗ್‍ಬಾಸ್ ಅಕ್ಕಿ- ಜಿರಿಗೆಯನ್ನು ಬೇರ್ಪಡಿಸಿರುವುದು ಆಗಿದ್ದರೆ, ಮಂಜು, ವೈಷ್ಣವಿ ನಿದ್ದೆ ಹೋಗಿದ್ದರೆ ಎರಡನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ:ಹಾಲು ಕರೆದು, ಒಲೆ ಹಚ್ಚಿ ಖಡಕ್ ರೊಟ್ಟಿ ಮಾಡಿದ ಅದಿತಿ ಪ್ರಭುದೇವ

Share This Article
Leave a Comment

Leave a Reply

Your email address will not be published. Required fields are marked *