ಭಾರತದಾದ್ಯಂತ ಇಂದು 72ನೇ ಗಣರಾಜ್ಯೋತ್ಸವ ಸಂಭ್ರಮ

Public TV
1 Min Read

ನವದೆಹಲಿ: ಇಂದು 72ನೇ ಗಣರಾಜ್ಯೋತ್ಸವ. ಒಂದೆಡೆ ಕೊರೊನಾ, ಮತ್ತೊಂದೆಡೆ ಕೃಷಿ ಕಾಯ್ದೆ ವಿರುದ್ಧ ಮೊಳಗಿರುವ ಅನ್ನದಾತನ ರಣಕಹಳೆ. ಇದರ ನಡುವೆ ಭಾರತದಾದ್ಯಂತ ಇಂದು ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.

72 ವರ್ಷಗಳ ಗಣತಂತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ರಾಷ್ಟ್ರೀಯ ಹಬ್ಬವೊಂದನ್ನು ಆಚರಿಸ್ತಿದ್ದೇವೆ. ಹಾಗಾಗಿ ಗಣರಾಜ್ಯೋತ್ಸವ ಹಿಂದೆಂದಿಗಿಂತಲೂ ಭಿನ್ನ ವಿಭಿನ್ನವಾಗಿದೆ. ಗಣರಾಜ್ಯೋತ್ಸವ ಅಂದರೆ ಭಾರತದ ಶಕ್ತಿ, ಸಾಂಸ್ಕøತಿಕ ಪರಂಪರೆಯನ್ನು ಪ್ರದರ್ಶಿಸೋ ದಿನ. ಆದರೆ ಕೊರೊನಾದಿಂದ ಎಲ್ಲದರಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ದೆಹಲಿ ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಗಲಿದೆ.

ಪ್ರಧಾನಿ ಮೋದಿ ಮೊದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಬಳಿಕ ಸೇನೆಗೌರವ ಸ್ವೀಕರಿಸಿ ರಾಜಪಥ್‍ಗೆ ಆಗಮಿಸಲಿದ್ದಾರೆ. ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸಲಿದ್ದಾರೆ. ಬಳಿಕ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ನಂತರ ಸೇನೆಯ ಶಕ್ತಿ ಪ್ರದರ್ಶನ ನಡೆಯಲಿದೆ.

ರಾಜಪಥ್‍ನಲ್ಲಿ ಸಾಗೋ ಪರೇಡ್‍ನ ಅಂದ ಹೆಚ್ಚಿಸೋದೇ ಟ್ಯಾಬ್ಲೋಗಳು. ಕರ್ನಾಟಕದಿಂದ ಈ ಬಾರಿ ವಿಜಯನಗರ ಸಾಮ್ರಾಜ್ಯದ ಗತವೈಭವ ಅನಾವರಣಗೊಳ್ಳಲಿದೆ. ಹಂಪಿಯ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಕಲಾವಿದ ಶಶಿಧರ ಅಡಪ ನೇತೃತ್ವದ ತಂಡ ರೂಪಿಸಿರುವ ಸ್ತಬ್ಧಚ್ರಿತ್ರದಲ್ಲಿ ಸೈನ್ಯದ ಮಹತ್ವ, ಹಂಪಿಯ ವಾಸ್ತುಶಿಲ್ಪ, ಐತಿಹಾಸಿಕ ದೇವಾಲಯಗಳ ಸೊಬಗು ಎದ್ದು ಕಾಣುತ್ತಿವೆ. ಸ್ತಬ್ಧಚಿತ್ರದ ಮುಂಭಾಗದಲ್ಲಿ ಉಗ್ರನರಸಿಂಹನ ಮೂರ್ತಿ ಇದೆ. ಜೊತೆಗೆ ಅಂಜನಾದ್ರಿ ಬೆಟ್ಟ, ಕೃಷ್ಣದೇವರಾಯನ ಪಟ್ಟಾಭಿಷೇಕದ ಸಂದೇಶವೂ ಇರಲಿದೆ. ಸ್ತಬ್ಧಚಿತ್ರದ ಜೊತೆಗೆ ಶಿವಮೊಗ್ಗ ರಂಗಾಯಣದ 12 ಮಂದಿ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ವಿವಿಧ ಸಂಸ್ಕøತಿಯ ಅನಾವರಣವೇ ಇಲ್ಲಿ ಆಗುತ್ತದೆ. ಈ ಬಾರಿ 32 ಟ್ಯಾಬ್ಲೋಗಳು ಸಾಗಲಿದೆ. ವಿವಿಧ ರಾಜ್ಯ ಮತ್ತು ಕೇಂದ್ರಾದಳಿತ ಪ್ರದೇಶದ 17 ಸ್ತಬ್ಧಚಿತ್ರ, 9 ಸಚಿವಾಲಯಗಳ ಟ್ಯಾಬ್ಲೋ ಮತ್ತು ರಕ್ಷಣಾ ಇಲಾಖೆಯ 6 ಟ್ಯಾಬ್ಲೋ ರಾಜಪಥದಲ್ಲಿ ಸಾಗಲಿದೆ. ಅಯೋಧ್ಯೆಯ ರಾಮಮಂದಿರ ಈ ಬಾರಿ ಉತ್ತರ ಪ್ರದೇಶದ ಟ್ಯಾಬ್ಲೋ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *