ಬ್ಯಾರನ್‌ ಜ್ವಾಲಾಮುಖಿ ಸ್ಫೋಟ – ಬೆಂಗಳೂರು, ಮೈಸೂರಿನಲ್ಲಿ ಭಾರೀ ಮಳೆ ಸಾಧ್ಯತೆ

Public TV
1 Min Read

ಬೆಂಗಳೂರು: ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪ ವ್ಯಾಪ್ತಿಗೆ ಬರುವ ಬ್ಯಾರನ್ ಜ್ವಾಲಾಮುಖಿ ಇಂದು ಸ್ಪೋಟಗೊಂಡ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ.

ಈಗಾಗಲೇ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ 6:45ಕ್ಕೆ ಜ್ವಾಲಾಮುಖಿ ಸ್ಫೋಟಗೊಂಡಿದ್ದರಿಂದ ಮಳೆಯಾಗುತ್ತಿದೆ ಎಂದು ಭೂ ವಿಜ್ಞಾನಿ ಪ್ರಕಾಶ್‌ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

ಬೆಂಗಳೂರು, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಇಂದು ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬ್ಯಾರನ್ ಜ್ವಾಲಾಮುಖಿ ಎಲ್ಲಿದೆ?
ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪ ವ್ಯಾಪ್ತಿಯಲ್ಲಿರುವ ದೇಶದ ಏಕೈಕ ಜೀವಂತ ಜ್ವಾಲಾಮುಖಿ ಇದಾಗಿದ್ದು, ಪೋರ್ಟ್‌ಬ್ಲೇರ್‌ನಿಂದ 140 ಕಿ ಮೀ ದೂರದ ಬ್ಯಾರನ್‌ ದ್ವೀಪದಲ್ಲಿದೆ. ಸುಮಾರು 150 ವರ್ಷ ತಟಸ್ಥಗೊಂಡು, 1991ರಲ್ಲಿ ಒಮ್ಮೆ ಬುಸುಗುಟ್ಟಿದ್ದ ಈ ಜ್ವಾಲಾಮುಖಿ ಕಳೆದ ವರ್ಷ ನ.6 ರಿಂದ ಸಕ್ರಿಯವಾಗಿತ್ತು.

ಭಾರತ ಮತ್ತು ಬರ್ಮೀಸ್‌ ಭೂಪದರಗಳ ಕೂಡುವಿಕೆ ಪ್ರದೇಶದಲ್ಲಿರುವ ಈ ಜ್ವಾಲಾಮುಖಿ ಸುಮಾರು 18 ಲಕ್ಷ ವರ್ಷಗಳಷ್ಟು ಹಳೆಯದು. 1803ರಿಂದಲೂ ಈ ಜ್ವಾಲಾಮುಖಿ ತಟಸ್ಥವಾಗಿತ್ತು. 1991ರಲ್ಲಿ ಸುಮಾರು ಸುಮಾರು 6 ತಿಂಗಳ ಕಾಲ ಇದು ಸಕ್ರಿಯವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *