ಬೆಡ್ ಸಿಗದೆ ಕಾರಿನಲ್ಲೇ ನರಳಾಡಿ ಪ್ರಾಣ ಬಿಟ್ಟ ಸೋಂಕಿತೆ

Public TV
0 Min Read

ನವದೆಹಲಿ: ಮಹಿಳೆಯೊಬ್ಬರಿಗೆ ಬೆಡ್ ಸಿಗದೇ ಕಾರಿನಲ್ಲಿಯೇ ಕೊನೆಯುಸಿರೆಳದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಜಾಗೃತಿ ಗುಪ್ತಾ(35) ಮೃತರಾಗಿದ್ದಾರೆ. ನೋಯ್ಡಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಗಂಡ ಮತ್ತು ಮಕ್ಕಳು ಮಧ್ಯಪ್ರದೇಶದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಜಾಗೃತಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಜಾಗೃತಿಗೆ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಆಕೆ ವಾಸವಿರುವ ಮನೆಯ ಮಾಲೀಕ ಸರ್ಕಾರಿ ನಿಯಂತ್ರಿತ ಜಿಐಎಂಎಸ್ ಆಸ್ಪತ್ರೆಗೆ ಕರೆದುಕೊಂಡುಹೋಗಿದ್ದಾರೆ.

ಅದಾದರ ನಂತರ ಜಾಗೃತಿ ಜೊತೆಯಲ್ಲೇ ಇದ್ದ ಮನೆ ಮಾಲೀಕ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆಕೆ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ತಕ್ಷಣ ಕಾರಿನ ಬಳಿ ಬಂದ ಸಿಬ್ಬಂದಿ ಪರೀಕ್ಷಿಸಿದಾಗ ಆಕೆ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *