ಬೆಂಗಳೂರು ಬೆಡ್ ದಂಧೆ, ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ: ಸಿಟಿ ರವಿ

Public TV
1 Min Read

– ಇಂತಹವರು ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ

ಚಿಕ್ಕಮಗಳೂರು: ಸಂದರ್ಭದ ದುರ್ಲಾಭ ಪಡೆಯೋ ಪಾಪಿಗಳು, ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಡ್ ಬ್ಲಾಕ್ ದಂಧೆ ಹೇಯ ಕೃತ್ಯ, ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಮೊದಲು ಮೆಡಿಕಲ್ ಸೀಟ್ ಬ್ಲಾಕ್ ಕೇಳಿದ್ದೆ. ಆದರೆ ಇಂತಹ ವಿಷಮ ಸಂದರ್ಭದಲ್ಲಿ ಕೋವಿಡ್ ಬೆಡ್ ಬ್ಲಾಕ್ ಮಾಡಿ ಬ್ಲಾಕ್ ಮಾರ್ಕೆಟ್ ಮಾಡುವ ಪಾಪಿಗಳನ್ನು ಈಗಲೇ ಕೇಳಿದ್ದು. ಅವರು ಯಾವುದರಲ್ಲೂ ಪ್ರಾಯಶ್ಚಿತ ಮಾಡಿಕೊಳ್ಳಲು ಆಗಲ್ಲ, ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

ಸಾವಿರಾರು ಜನರ ಸಾವಿಗೆ ಕಾರಣರಾದವರ ಪಾಪ ಕೃತ್ಯಕ್ಕೆ ಕ್ಷಮೆ ಇಲ್ಲ, ಅವರ ಬಗ್ಗೆ ಯಾರೂ ಸಮರ್ಥನೆ ಮಾಡಲು ಆಗುವುದಿಲ್ಲ, ಕಠಿಣ ಶಿಕ್ಷೆ ಆಗಬೇಕು. ಸಂಸದ ತೇಜಸ್ವಿ ಸೂರ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಸಾವಿರಾರು ಜನ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕಿಲ್ಲ ಎಂದರೆ ಅದಕ್ಕೆ ಇಂತಹ ಪಾಪಿಗಳೇ ಕಾರಣ ಎಂದರು.

ಯಾವ ಆಸ್ಪತ್ರೆ, ಯಾರು ಶಾಮೀಲಾಗಿದ್ದಾರೆ ಎಲ್ಲ ಹೊರಬರಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕು. ಈಗಾಗಲೇ ಎಫ್‍ಐಆರ್ ದಾಖಲಾಗಿದೆ, ಯಾರ್ಯಾರು ಕಾಲ್ ಸೆಂಟರ್ ನಡೆಸುತ್ತಿದ್ದರು. ಅದರ ನೇತೃತ್ವ ವಹಿಸಿದ್ದವರು ಯಾರು? ಎಲ್ಲವೂ ತನಿಖೆ ಆಗಬೇಕು. ಅವರು ಅರೆಸ್ಟ್ ಕೂಡ ಆಗಿದ್ದಾರೆ. ಎಷ್ಟು ಬೆಡ್ ಈ ರೀತಿ ಆಗಿದೆ, ಯಾವ್ಯಾವ ಆಸ್ಪತ್ರೆಗಳಲ್ಲಿ ಮಾಡಿದ್ದಾರೆ. ಇನ್ನೂ ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ. ಎಲ್ಲ ಸಂಗತಿ ಹೊರಬರಬೇಕು. ಜೀವ ಉಳಿಸಲು ಒದ್ದಾಡುವಾಗ ಪ್ರಾಣದ ಜೊತೆ ಚೆಲ್ಲಾಟ ಆಡುವ ನೀಚ ಕೃತ್ಯ ಮಾಡಿದ್ದಾರೆ ಇದಕ್ಕೆ ಕ್ಷಮೆ ಇಲ್ಲ. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *