ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದ ಶಿವಸೇನೆ ಕಾರ್ಯಕರ್ತರು

Public TV
1 Min Read

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದರೆಂಬ ಕಾರಣಕ್ಕೆ ಬಿಜೆಪಿ ನಾಯಕನಿಗೆ ಶಿವಸೇನೆಯ ಕಾರ್ಯಕರ್ತರು ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ನಾಯಕ ಶಿರೀಶ್ ಕಟೇಕರ್ ಅವರಿಗೆ ಶಿವಸೇನೆ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ತಮ್ಮ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅವಹೇಳನ ಕಾರಿ ಪದ ಬಳಕೆ ಮಾಡಿರುವ ಕಾರಣ ಕಟೇಕರ್ ಮುಖಕ್ಕೆ ಮಸಿ ಬಳಿದಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ನಮ್ಮ ನಾಯಕರಾದ ಉದ್ಧವ್ ಜೀ ವಿರುದ್ಧ ಕಟೇಕರ್ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಸೇನಾ ಕಾರ್ಯಕರ್ತರಾದ ನಾವು ಕಟೇಕರ್‍ಗೆ ಮಸಿ ಬಳಿದು ಬಳೆ ಹಾರಹಾಕಿ ಸೀರೆ ಹೊದಿಸಿದ್ದೇವೆ. ನಮ್ಮ ನಾಯಕರ ಬಗ್ಗೆ ಈ ರೀತಿ ನಡೆದುಕೊಂಡರೆ ನಾವು ಯಾವುದೇ ರೀತಿಯ ಕಾರ್ಯಕ್ಕೂ ಸಿದ್ಧರಿದ್ದೇವೆ. ನಾವು ದಾಳಿ ಮಾಡಿ ಜೈಲಿಗೆ ಹೋಗಲು ರೆಡಿ ಎಂದು ಸೇನಾ ಕಾರ್ಯಕರ್ತ ಪುರುಷೋತ್ತಮ್ ಬರ್ಡೆ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಕರಣ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕರಾದ ರಾಮ್ ಕದಾಮ್, ಈ ರೀತಿ ಹಲ್ಲೆ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ಗೃಹ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *