ಬಿಗ್‍ಬಾಸ್ ಮುಂದೆ ವೈಷ್ಣವಿ ಮತ್ತು ಶುಭಾ ಇಟ್ಟ ಬೇಡಿಕೆ ಏನು ಗೊತ್ತಾ?

Public TV
1 Min Read

ಬೆಂಗಳೂರು: ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಬೀಗಿದ ಅನುಬಂಧ ತಂಡದ ಕ್ಯಾಪ್ಟನ್ ಶುಭಾ ಮತ್ತು ತಂಡದ ಸದಸ್ಯೆ ವೈಷ್ಣವಿ ತಮಗೆ ಕೈ ನೋವಿದೆ ಹಾಗಾಗಿ ನಾವು ಕೇಳಿದ್ದನ್ನು ಕೊಡಿಸಿ ಎಂದು ಬಿಗ್ ಬಾಸ್ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಟಾಸ್ಕ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದ ನಿಧಿ ಪ್ಲಾಸ್ಟರ್ ಹಾಕಿಕೊಂಡು ಹೊರ ಬರುತ್ತಿದ್ದಂತೆ ಏನ್ ಕೊಟ್ರು ಎಂದು ಶುಭಾ ಪ್ರಶ್ನೆ ಎತ್ತಿ ಏನ್ ಜ್ಯೂಸ್ ಕೊಟ್ರು ಎಂದು ಕೇಳಿದರು. ಈ ವೇಳೆ ನಿಧಿ ಪ್ಲಾಸ್ಟರ್ ಹಾಕಿ ಜ್ಯೂಸ್ ಕೊಟ್ರು ಎಂದರು. ಈ ವೇಳೆ ಜೊತೆಗಿದ್ದ ಶುಭಾ ಮತ್ತು ವೈಷ್ಣವಿ ಕೈ ಹಿಡಿದುಕೊಂಡು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ನಮಗೆ ಕೈ ನೋವಿದೆ ಹಾಗಾಗಿ ನಮಗೆ ಜ್ಯೂಸ್ ಕೊಡಿಸಬೇಕಾಗಿ ಬೇಡಿಕೆ ಇಟ್ಟರು.

ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನೋವಿನಿಂದ ನರಳುವಂತೆ ನಮಗೆ ಕೈ ತುಂಬಾ ನೋವು ಆಗುತ್ತಿದೆ. ಹಾಗಾಗಿ ಜ್ಯೂಸ್ ಕೊಡಿಸಿ ಎಂದರು ನಂತರ ಶುಭಾ, ವೈಷ್ಣವಿ ಬಳಿ ಯಾವ ಜ್ಯೂಸ್ ಆಗಬಹುದೆಂದು ಕೇಳಿದರು. ವೈಷ್ಣವಿ ಫ್ರುಟ್ ಪಂಚ್ ಜ್ಯೂಸ್ ಆಗಬಹುದು. ನಮ್ಮನ್ನಿಬ್ಬರನ್ನೇ ಕರೆದು ಜ್ಯೂಸ್ ಕೊಡಿಸಿ ಇಲ್ಲದಿದ್ದರೆ ಎಲ್ಲರೂ ಬರಬಹುದು. ಫ್ರುಟ್ ಪಂಚ್ ಇಲ್ಲದಿದ್ದರೆ ವಾಟರ್‌ಮೆಲನ್ ಕೂಡ ಆಗಬಹುದೆಂದು ಮನವಿ ಮಡಿಕೊಂಡರು.

ಇವರ ನಾಟಕಕ್ಕೆ ಕರಗಿ ಬಿಗ್ ಬಾಸ್ ಜ್ಯೂಸ್ ಕೊಡಿಸುತ್ತಾರಾ? ಇಲ್ಲವೋ ಎನ್ನುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *