ಬಿಗ್‍ಬಾಸ್ ಮನೆಯಲ್ಲಿ ಹುಟ್ಟಿಕೊಂಡ್ರು ಹೊಸ ಸಿಂಗರ್

Public TV
1 Min Read

ಬಿಗ್‍ಬಾಸ್ ಕಾರ್ಯಕ್ರಮದ ಪ್ರತಿ ಸೀಸನ್‍ನಲ್ಲಿಯೂ ಒಬ್ಬ ಗಾಯಕ ಅಥವಾ ಗಾಯಕಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ. ಸದ್ಯ ಬಿಗ್‍ಬಾಸ್ ಸೀಸನ್ -8 ರಲ್ಲಿ ದೊಡ್ಮನೆಗೆ ಗಾಯಕಿ ಗೀತಾ ಭಟ್ ಹಾಗೂ ಗಾಯಕ ವಿಶ್ವನಾಥ್ ಶಮಂತ್ ಆಗಿಮಿಸಿದ್ದರು. ಸದ್ಯ ಗೀತಾ ಭಟ್ ಮತ್ತು ಗಾಯಕ ವಿಶ್ವನಾಥ್ ಎಲಿಮೀನೆಟ್ ನಂತರ ಉಳಿದಿರುವುದು ಶಮಂತ್ ಮಾತ್ರ. ಆದ್ರೆ ಇವರೆಲ್ಲರ ಮಧ್ಯೆ ರೊಚ್ಚಿಗೆದ್ದು ವೈಷ್ಣವಿ ದೊಡ್ಮನೆಯಲ್ಲಿ ಹಾಡು ಹೇಳಲು ಆರಂಭಿಸಿದ್ದಾರೆ. ಅದರಲ್ಲೂ ಇವರ ಹಾಡು ಹೇಗಿದೆ ಅಂದ್ರೆ ಮನೆಮಂದಿಯೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ವೈಷ್ಣವಿ ಈಗ ಫುಲ್ ವೈಲೆಂಟ್ ಆಗಿದ್ದಾರೆ. ಬಿಗ್‍ಬಾಸ್ ಮನೆಯ ಹಲವು ಮಂದಿಗೆ ಹಾಡು ಹೇಳಲು ಬರುವುದಿಲ್ಲ ಅದರಲ್ಲಿ ವೈಷ್ಣವಿ ಕೂಡ ಒಬ್ಬರು. ಸದ್ಯ ವೈಷ್ಣವಿಗೆ ಹಾಡು ಹೇಳುವಂತೆ ಚಕ್ರವರ್ತಿಯವರು ಕೇಳುತ್ತಾರೆ. ಆಗ ವೈಷ್ಣವಿ ನನಗೆ ಬರುವುದಿಲ್ಲ ನೀವು ನಿದ್ದೆ ಮಾಡುತ್ತೀರಾ ಎನ್ನುತ್ತಾರೆ. ಪರವಾಗಿಲ್ಲ ನಾನು ನಿದ್ದೆ ಹೋಗುವುದಿಲ್ಲ ಹಾಡು ಹೇಳು ಎಂದಾಗ ‘ಒಂದೇ ಒಂದು ಸಾರಿ ಕಣ್ಣು ಮುಂದೆ ಬಾರೆ..’ ಎಂದು ಹೇಳುತ್ತಾರೆ. ಅದಕ್ಕೆ ಇಷ್ಟೇ ನಾ ಹಾಡು ಎಂದು ಚಕ್ರವರ್ತಿ ಕೇಳಿ ಮತ್ತೊಂದು ಹಾಡು ಹೇಳು ಎಂದು ಕೇಳಿದ್ದಾರೆ. ಆಗ ವೈಷ್ಣವಿ ಸುಮ್ಮನೆ ಹೀಗೆ ನಿನ್ನನೇ ಎಂದು ಮೂಗಿನಲ್ಲಿಯೇ ಹಾಡು ಹೇಳುತ್ತಾರೆ. ಈ ವೇಳೆ ಅರವಿಂದ್ ಹಾಡಿರಲಿ ಆ ಎಕ್ಸ್‍ಪ್ರೆಷನ್ ಕೊಡುತ್ತಿರಲ್ಲ ಯಪ್ಪಾ.. ಎಂದು ಅಣುಕಿಸುತ್ತಾರೆ.

ಇತ್ತೀಚೆಗೆ ಶಮಂತ್ ಬರೆದಿದ್ದ ಮಳೆಯೇ ಸುರಿ.. ಮಳೆಯೇ ಸುರಿ ಹಾಡನ್ನು ವೈಷ್ಣವಿಯವರು ಹಾಡಿದ್ದರು. ಈ ಹಾಡನ್ನು ಕೇಳಿ ಶಾಕ್ ಆದ ಮನೆಮಂದಿಯೆಲ್ಲಾ ವೈಷ್ಣವಿ ಇಷ್ಟು ಕೆಟ್ಟ ಸಿಂಗರ್ ಎಂದು ಗೊತ್ತಿರಲಿಲ್ಲ, ನಾವೇ ಕೆಟ್ಟದಾಗಿ ಹಾಡುತ್ತೇವೆ ಎಂದರೆ ಇವಳು ನಮಗಿಂತ ಕೆಟ್ಟದಾಗಿ ಹಾಡುತ್ತಾಳೆ ಎಂದು ಹಾಸ್ಯ ಮಾಡಿದರೆ. ದಿವ್ಯಾ ಉರುಡುಗ ಅರವಿಂದ್ ಚೇರ್ ನಿಂದ ಎದ್ದು ಬಿದ್ದು ನಕ್ಕಿದ್ದರು. ಇದನ್ನೂ ಓದಿ: ನಾನು ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡ್ತಿದ್ದೆ: ಶುಭಾ ಪೂಂಜಾ

Share This Article
Leave a Comment

Leave a Reply

Your email address will not be published. Required fields are marked *