ಬಸ್ ಡ್ರೈವರ್ ಆತ್ಮಹತ್ಯೆ ಬೆನ್ನಲ್ಲೇ ಕಾಣೆಯಾದ ಬಸ್

Public TV
1 Min Read

-ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಚಾಲಕ

ಬೀದರ್: ಚುನಾವಣೆಯ ಕರ್ತವ್ಯಕ್ಕೆ ಹೋಗಿದ್ದ ಸಾರಿಗೆ ಚಾಲಕ ಬಸ್ ಡಿಪೋ 1 ರಲ್ಲಿ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

ಓಂಕಾರ್ (40) ಆತ್ಮಹತ್ಯೆಗೆ ಶರಣಾದ ಬಸ್ ಡ್ರೈವರ್. ಇಂದು ಅನುಮಾನಾಸ್ಪದವಾಗಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓಂಕಾರ ಮೂಲತಃ ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ನಿವಾಸಿಯಾಗಿದ್ದಾರೆ.

ಇಂದು ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಓಂಕಾರ್ ಅವರನ್ನು ಬೀದರ್ ತಾಲೂಕಿನ ಸಂಗೊಳಿ ಮತಗಟ್ಟೆಗೆ ಸಾರಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಚುನಾವಣಾ ಕರ್ತವ್ಯಕ್ಕೆಂದು ಬಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಓಂಕಾರ್ ಕಳೆದ ಎಂಟು ವರ್ಷದಿಂದ ಸಾರಿಗೆ ಬಸ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಓಂಕಾರ್ ಓಡಿಸುತ್ತಿದ್ದ ಏಂ-32 ಈ-926 ಸಂಖ್ಯೆಯ ಸಾರಿಗೆ ಬಸ್ ನಾಪತ್ತೆಯಾಗಿದೆ. ನಾಪತ್ತೆಯಾಗಿರುವ ಸಾರಿಗೆ ಬಸ್‍ಗಾಗಿ ಪೊಲೀಸರು ಹಾಗೂ ಸಾರಿಗೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.

ಓಂಕಾರ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನ್ಯೂ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಡ್ರೈವರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲಾ.

Share This Article
Leave a Comment

Leave a Reply

Your email address will not be published. Required fields are marked *