ಬಸ್ಸಿನಲ್ಲಿದ್ದ ಬೆಂಕಿ ನಿರೋಧಕ ಸಿಲಿಂಡರ್ ಓಪನ್ – ಜಿಗಿದ ಮೂವರಿಗೆ ಗಂಭೀರ ಗಾಯ

Public TV
1 Min Read

ಶಿವಮೊಗ್ಗ: ಪ್ರಾಣ ರಕ್ಷಣೆಗಾಗಿ ಚಲಿಸುತ್ತಿದ್ದ ಬಸ್ಸಿನಿಂದ ಮೂವರು ಪ್ರಯಾಣಿಕರು ಹೊರಗೆ ಜಿಗಿದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿರಿವಂತೆ ಬಳಿ ನಡೆದಿದೆ.

 

ಈ ಅವಘಡದಲ್ಲಿ ಇಬ್ಬರು ಯುವತಿಯರು ಮತ್ತು ಯುವಕ ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಜೋಗಕ್ಕೆ ನಿನ್ನೆ ರಾತ್ರಿ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬಸ್ಸಿನಲ್ಲಿದ್ದ ಬೆಂಕಿ ನಿರೋಧಕ ಸಿಲಿಂಡರ್ ಮೇಲೆ ಭಾರವಾದ ಲಗೇಜ್ ಇರಿಸಲಾಗಿತ್ತು. ಲಗೇಜ್‍ನ ಭಾರಕ್ಕೆ ಕೆಳಗೆ ಬಿದ್ದು ಸಿಲಿಂಡರ್ ಓಪನ್ ಆಗಿದೆ. ಸಿಲಿಂಡರ್ ಓಪನ್ ಆದ ಪರಿಣಾಮ ಬಸ್ ತುಂಬ ಹೊಗೆ ತುಂಬಿಕೊಂಡಿದೆ. ಹೀಗಾಗಿ ಗಾಬರಿಗೊಂಡು ಚಲಿಸುತ್ತಿದ್ದ ಬಸ್ಸಿನಿಂದ ಮೂವರು ಹೊರಗೆ ಜಿಗಿದಿದ್ದಾರೆ.

ಈ ಅವಘಡದಲ್ಲಿ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *