ಬಳ್ಳಾರಿಯಲ್ಲಿಂದು ಪ್ರತ್ಯೇಕ ಎರಡು ಬೈಕ್ ಅಪಘಾತ – ಮೂವರ ಸಾವು

Public TV
1 Min Read

– ನಡು ಮುರಿದು ನುಜ್ಜುಗುಜ್ಜಾದ ಯುವತಿ ದೇಹ

ಬಳ್ಳಾರಿ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಎರಡು ಪ್ರತ್ಯೇಕ ಬೈಕ್ ಅಪಘಾತವಾಗಿದ್ದು, ಮೂವರ ಸಾವಿಗೀಡಾದ ಘಟನೆ ನಡೆದಿದೆ.

ಬಳ್ಳಾರಿ ತಾಲೂಕಿನ ಮೋಕಾ ಎಲ್‍ಎಲ್‍ಸಿ ಕಾಲುವೆ ಬಳಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಟಾಟಾ ಏಸಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪರಿಣಾಮ ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದ ನಿವಾಸಿಗಯಾದ ಚಂದ್ರಪ್ಪ (59) ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯ ಸವಾರ ವೀರೇಶ (66) ಗಂಭೀರ ಗಾಯಗೊಂಡಿದ್ದಾರೆ.

ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಕೌತಾಳಂ ಮಂಡಲದ ಉರುಕುಂದಿ ಈರಣ್ಣನ ದರ್ಶನ ಭಾಗ್ಯ ಪಡೆದು ವಾಪಸ್ ಬಳ್ಳಾರಿಗೆ ಬರುವ ಮಾರ್ಗದಲ್ಲೇ ಮೋಕಾ ಎಲ್‍ಎಲ್‍ಸಿ ಕಾಲುವೆಯ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಅಪಘಾತದ ಬಳ್ಳಾರಿ ಹೊಸಪೇಟೆ ಸಮೀಪದ ಅನಂತಶಯನಗುಡಿ ಬಳಿ ನಡೆದಿದ್ದು, ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಬೈಕ್ ಸವಾರರು ಇಬ್ಬರು ಸಾವಿಗೀಡಾಗಿದ್ದಾರೆ. ಮೃತರರನ್ನು ಕೂಡ್ಲಿಗಿ ಮೂಲದ ರಾಜು (34), ಕಾರಿಗನೂರಿನ ರಂಜಿತಾ (24) ಎಂದು ಗುರುತಿಸಲಾಗಿದೆ. ಹೊಸಪೇಟೆಯ ಶಾನ್ ಬಾಗ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ಹಂಪಿಯಿಂದ ಹೊಸಪೇಟೆಗೆ ಆಗಮಿಸುತ್ತಿದ್ದಾಗ ಈ ದುರ್ಘನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ದೇಹಗಳು ನುಜ್ಜುಗುಜ್ಜಾಗಿವೆ.

Share This Article
Leave a Comment

Leave a Reply

Your email address will not be published. Required fields are marked *