ಬರೀ ಹೆಸರಿಗಷ್ಟೇ ಜನತಾ ಲಾಕ್‍ಡೌನ್- ರೇಷನ್ ಅಂಗಡಿಗಳ ಎದುರು ಜನರ ಕ್ಯೂ..!

Public TV
2 Min Read

ಬೆಂಗಳೂರು: ಜನತಾ ಲಾಕ್ ಡೌನ್ ಇದ್ದರೂ ಇಂದು ಮಾರುಕಟ್ಟೆಗಳಲ್ಲಿ ಕೊರೊನಾ ಮರೆತು ಜನ ಹೂ, ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು. ಸೋಮವಾರದಿಂದ ಹೊಸ ರೂಲ್ಸ್. ಹಾಗಾಗಿ ಮನೆಯಲ್ಲಿ ನಾಳೆನೇ ದಿನಸಿ ಮುಗಿದು ಹೋಗುತ್ತೆ ಅಂತಾ ಇವತ್ತೇ ಅಗತ್ಯ ವಸ್ತು ಖರೀದಿಗೆ ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದಾರೆ. ಡಿಸ್ಕೌಂಟ್ ಕೊಡೋ ಸೂಪರ್ ಮಾರ್ಕೆಟ್‍ಗಳ ಎದುರು ಕಿಲೋ ಮೀಟರ್‍ಗಟ್ಟಲೇ ನಿಂತಿದ್ದಾರೆ.

ಇನ್ನೊಂದೆಡೆ ಕೊರೊನಾ ಇರಲಿ ಮತ್ತೊಂದ್ ಇರಲಿ ನಮಗೆ ಎಣ್ಣೆ ಬೇಕು ಅಂತ ನಿಂತಿದ್ದಾರೆ. ಇನ್ನೇನು ನಾಡಿದ್ದು ಅಂದ್ರೆ ಸೋಮವಾರದಿಂದ ರಾಜ್ಯದಲ್ಲಿ ರಫ್ & ಟಫ್ ರೂಲ್ಸ್ ಜಾರಿಯಾಗ್ಬಿಡುತ್ತೆ ಅನ್ನೋ ಭಯದಲ್ಲಿ ಮಲ್ಲೇಶ್ವರಂನಲ್ಲಿ ಜನ ಇವತ್ತೇ ಎಣ್ಣೆ ಖರೀದಿಗೆ ಮುಗಿಬಿದ್ದಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲೂ ಇಂತದ್ದೇ ದೃಶ್ಯ ಕಂಡು ಬಂತು. ಬೆಳಗ್ಗೆಯಿಂದಲೇ ವೈನ್ ಶಾಪ್‍ಗೆ ಮುಗಿಬಿದ್ದಿದ್ರು. ಲಾಕ್ ಡೌನ್ ನಲ್ಲಿ ಮದ್ಯದ ಅಂಗಡಿ ತೆರೆಯುತ್ತೆವೆ ಅಂದ್ರು ಕೇಳದ ಎಣ್ಣೆ ಬೇಕೇ ಬೇಕು ಅಂತ ಮುಗಿಬಿದ್ದಿದ್ರು.

ಬಸ್ ಸಂಚಾರಕ್ಕೆ ಕಡಿವಾಣ ಹಾಕಿದ್ರೂ ಜನ ಮಾತ್ರ ಈ ಡಿಸ್ಕೌಂಟ್ ಲಾಕ್‍ಡೌನ್‍ನಲ್ಲೂ ಓಡಾಡ್ತಿದ್ದಾರೆ. ಯಾಕಂದ್ರೆ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಜನ ರೈಲಿನಲ್ಲಿ ಸಂಚರಿಸ್ತಿದ್ದಾರೆ. ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗಿ ಹೆಮ್ಮಾರಿ ಕೊರೊನಾ ವೈರಸ್ ಹಬ್ಬಿಸ್ತಿದ್ದಾರೆ.

ಬೆಂಗಳೂರು ಸಹವಾಸ ಬ್ಯಾಡಪ್ಪೊ ಬ್ಯಾಡ ಅಂತ ತಮ್ಮೂರಿಗೆ ಈ ಕೂಲಿ ಕಾರ್ಮಿಕ ಕುಟುಂಬವೊಂದು ಹೊರಟು ನಿಂತಿದೆ. ಪುಟ್ಟ ಪುಟ್ಟ ಮಕ್ಕಳು, ಕೈಯಲ್ಲಿ ನೀರಿನ ಬಾಟಲು, ಲಗೇಜು ಸಮೇತ ಊರಿಗೆ ಹೊರಟಿದ್ದಾರೆ. ಕೈಯಲ್ಲಿ ಕಾಸಿಲ್ಲ, ಆದ್ರೂ ನಡೆದುಕೊಂಡೇ ನೆಲಮಂಗಲದ ತುಮಕೂರು ರಸ್ತೆಯ ಜಾಸ್ ಟೋಲ್ ಮೂಲಕ ರಾಯಚೂರಿನತ್ತ ಪಯಣ ಬೆಳೆಸಿದ್ದಾರೆ. ಕೋಲಾರದಲ್ಲೂ ಇಂತಹದ್ದೇ ದೃಶ್ಯ ಕಂಡುಬಂತು.

ಇಂದು ಸುಮ್ಮನಹಳ್ಳಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಜನರನ್ನು ನೋಡಿ ಪೊಲೀಸರು ಅಸಹಾಯಕರಾಗಿದ್ರು. ಯಾವ ವಾಹನಗಳನ್ನ ತಪಾಸಣೆ ಮಾಡದೇ ಸೈಂಲೆಟ್ ಆಗಿದ್ರು. ಇತ್ತ ಅತ್ತಿಬೆಲೆ ಮೂಲಕ ಕೂಡ ತಮಿಳುನಾಡಿಗೆ ಜನ ವಾಪಸ್ ಆಗ್ತಿದ್ದಾರೆ. ಹೆಚ್ಚಿನ ಜನಸಂಖ್ಯೆಯಲ್ಲಿ ಜನ ಹೋಗ್ತಿರೋದ್ರಿಂದ ಅತ್ತಿಬೆಲೆ ಗಡಿಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *