ಬದುಕಿದ್ದೇವೆ ಎಂದು ತೋರಿಸಲು ಕಾಂಗ್ರೆಸ್ಸಿನಿಂದ ಪ್ರತಿಭಟನೆ -ಸಿಎಂ ವ್ಯಂಗ್ಯ

Public TV
1 Min Read

ಬೆಂಗಳೂರು: ಕಾಂಗ್ರೆಸ್‌ನವರು ಆಗೊಮ್ಮೆ ಈಗೊಮ್ಮೆ ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಾರೆ ಎಂದು ಸಿಎಂ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಇಂದಿನ ಕಾಂಗ್ರೆಸ್‌ ಪ್ರತಿಭಟನೆ ಕುರಿತು ಮಾಧ್ಯಮಗಳು ವಿಧಾನಸೌಧದಲ್ಲಿ ಕೇಳಿದ ಪ್ರಶ್ನೆಗೆ ಸಿಎಂ, ಯಾರನ್ನೋ ಕರೆದುಕೊಂಡು ಬಂದು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್‌ನವರು ಭಾಷಣ ಶುರು ಮಾಡಿದ ತಕ್ಷಣ ಬಂದವರು ಎದ್ದು ಹೋಗಿದ್ದನ್ನು ನೀವೂ ನೋಡಿದ್ದೀರಿ. ಕಾಂಗ್ರೆಸ್‌ನವರು ಎಚ್ಚರವಾಗಿ ಎದ್ದು ನಿಂತು ಬದುಕಿದ್ದೇವೆ ಎಂದು ತೋರಿಸಲು ಈ ಪ್ರತಿಭಟನೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ನಾಳೆ ಖಾತೆ ಹಂಚಿಕೆ ಪಟ್ಟಿ ಪ್ರಕಟ ಮಾಡುತ್ತೇನೆ. ಪಟ್ಟಿ ಸಿದ್ಧವಾಗಿದ್ದು ಬೆಳಗ್ಗೆ ಬೆಳಗ್ಗೆ 7 – 8 ಗಂಟೆಗೆ ಖಾತೆ ಹಂಚಿಕೆಯನ್ನು ಪ್ರಕಟಿಸುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *