ಬಡಾಯಿ ಸಚಿವರ ಬಂಡವಾಳ ಬಯಲು – ವಿಧವೆಯರು, ವೃದ್ಧರಿಗೆ ಮಾಸಾಶನ ಕೊಡದ ಸರ್ಕಾರ

Public TV
1 Min Read

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ಕಣ್ಣೀರಿಡುತ್ತಿವ ಜನಕ್ಕೆ ಆಸರೆಯಾದ ಸರ್ಕಾರ ನಿದ್ದೆಗೆ ಜಾರಿತಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಸರ್ಕಾರ ನೀಡುವ ಮಸಾಶನವನ್ನೇ ನಂಬಿಕೊಂಡು ಅದೆಷ್ಟೋ ಜನ ಜೀವನ ನಡೆಸುತ್ತಿದ್ದಾರೆ. ಆದ್ರೆ ಕಂದಾಯ ಸಚಿವ ಅಶೋಕ್ ಇಲಾಖೆಯಲ್ಲಿ ಎಲ್ಲವೂ ಅಯೋಮಯವಾಗಿದ್ದು, 59 ಸಾವಿರ ಪ್ರಕರಣಗಳಿಗೆ ಪಿಂಚಣಿ ಹಣ ಪಾವತಿಯಾಗಿಲ್ಲ.

ಕೊರೊನಾ ಸಂಕಷ್ಟದಲ್ಲಿ ಮಾಸಾಶನ ಆಸರೆಯಾಗಿತ್ತು. ಸಚಿವರು ಸಹ ಹಣ ಬಾಕಿ ಬಗ್ಗೆ ಭೌತಿಕ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಕಿ ಅಂಶ ಸಂಗ್ರಹಿಸಬೇಕಾದ ಅಧಿಕಾರಿಗಳು ನಿದ್ದೆಗೆ ಜಾರಿದಂತೆ ಕಾಣಿಸುತ್ತಿದೆ. ಫಲಾನುಭವಿಗಳು ಪಿಂಚಣಿಗಾಗಿ ಅಲೆದಾಡುವಂತಾಗಿದೆ.

ಬೆಂಗಳೂರು 46,093, ಬೆಳಗಾವಿ 2,596, ಮಂಡ್ಯ 1,828, ರಾಯಚೂರು 1,810, ಯಾದಗಿರಿ 1,450 ಮತ್ತು ಕೊಪ್ಪಳ, ಮೈಸೂರು, ತುಮಕೂರು, ಬಳ್ಳಾರಿಯಲ್ಲಿ ತಲಾ 3,236 ಪ್ರಕರಣಗಳಿಗೆ ಪಿಂಚಣಿ ನೀಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *