ಬೆಂಗಳೂರು: ಇಂದು ರಾಜ್ಯ ಬಜೆಟ್ ಮಂಡನೆಯಾಗಿದೆ. ಬಿಎಸ್ವೈ ಅವರು ವಿಧಾನ ಸಭೆಯಲ್ಲಿ ತಮ್ಮ ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಇದು ಅನೈತಿಕ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿ ಸಭಾತ್ಯಾಗ ಮಾಡಿದ್ದರು. ಇಷ್ಟೆಲ್ಲಾ ಆದ ಬಳಿಕ ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು.
ಹೌದು. ಶಾಸಕ ಹಾಲಪ್ಪ ಪುತ್ರಿಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ ಹಾಸ್ಯ ಚಟಾಕಿ ಹಾರಿಸಿದರು. ಯಡಿಯೂರಪ್ಪ ಅವರು ಸಿದ್ದರಾಮಯ್ಯನನ್ನು ನೋಡುತ್ತಿದ್ದಂತೆಯೇ ನಮಗಿಂತ ಮುಂಚೆ ಹೇಗೆ ಬರ್ತಿರ ಸಾರ್ ನೀವು ಎಂದು ಕೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರು ವಿರೋಧ ಪಕ್ಷದವರು ಯಾವಾಗಲು ಮುಂಚೆ ಇರಬೇಕು ಎಂದು ಹಾಸ್ಯದಾಟಿಯಲ್ಲಿ ಪಂಚಿಂಗ್ ಡೈಲಾಗ್ ಹೊಡೆದರು.
ತಮ್ಮ ಮಾತಿಗೆ ಸಿದ್ದರಾಮಯ್ಯ ಪ್ರತ್ಯುತ್ತರ ನೀಡುತ್ತಿದ್ದಂತೆಯೇ ಜೋರಾಗಿ ನಕ್ಕ ಬಿಎಸ್ವೈ, ಸಿದ್ದು ಭುಜ ತಟ್ಟಿ, ಕೈ ಕುಲುಕಿ ಮುಂದೆ ನಡೆದರು.
ಒಟ್ಟಿನಲ್ಲಿ ರಾಜಕೀಯ ನಾಯಕರು ಪರಸ್ಪರ ಎಷ್ಟೇ ಕಿತ್ತಾಡಿಕೊಂಡರೂ ಪರಸ್ಪರ ಭೇಟಿಯಾದಾಗ ಎಲ್ಲವನ್ನೂ ಮರೆತು ಒಂದಾಗುತ್ತಾರೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.