ಪ್ರಯಾಣಿಕರೇ ಎಚ್ಚರ, ಎಚ್ಚರ – ನಾಳೆ ರಸ್ತೆಗಿಳಿಯಲ್ಲ ಖಾಸಗಿ ಬಸ್

Public TV
2 Min Read

– ಸಾರಿಗೆ ನೌಕರರ ಪ್ರತಿಭಟನೆ ಮುಂದುವರಿಕೆ

ಬೆಂಗಳೂರು: ಪ್ರಮುಖ ಬೇಡಿಕೆಯನ್ನ ಈಡೇರಿಲಸಲು ಸರ್ಕಾರ ಒಪ್ಪದ ಹಿನ್ನೆಲೆ ಸಾರಿಗೆ ನೌಕರರು ತಮ್ಮ ಮುಷ್ಕರವನ್ನ ಮುಂದುವರಿಸಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆಗೆ ಸಾಥ್ ಖಾಸಗಿ ಬಸ್ ಸಂಘ ಸಹ ಬೆಂಬಲ ನೀಡಿದೆ. ಖಾಸಗಿ ಬಸ್ ನಂಬಿ ನೀವು ಊರಿಗೆ ತೆರಳುತ್ತಿದ್ರೆ ನಿಮ್ಮ ಪ್ರಯಾಣ ಮುಂದೂಡುವುದು ಉತ್ತಮ.

ಈ ವೇಳೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಒಳ್ಳೆಯ ನಾಯಕನ ನೇತೃತ್ವದಲ್ಲಿ ನಿಮ್ಮೆಲ್ಲರ ಪ್ರತಿಭಟನೆ ನಡೆಯುತ್ತಿದೆ. ಹೋರಾಟ ಅನ್ನೋದು ಯಾವುದೋ ಒಬ್ಬ ಬ್ರೋಕರ್ ಅಡಿಯಲ್ಲಿ ಅಗುವಂತದಲ್ಲ. ನಾಯಕನ ಹೋರಾಟದ ಮೇಲೆ ನಮ್ಮೆಲ್ಲರ ಪ್ರತಿಫಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಆಡಳಿತದಲ್ಲಿರುವ ಸರ್ಕಾರದ ಪಕ್ಷದಲ್ಲಿಯೇ ನಾನಿದ್ದೇನೆ. ಅವರಿಗೆ ನಾನು ಮತ ಹಾಕಿದ್ದೇನೆ. ಸಾರಿಗೆ ಸಚಿವರು ನಮ್ಮ ಮನವಿಗಳಿಗೂ ಸ್ಪಂದಿಸಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಈ ಮಾತುಗಳನ್ನ ಹೇಳಲು ನನಗೆ ನೋವಾಗುತ್ತೆ ಎಂದರು.

ಇದು ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವೈಫಲ್ಯ ಅಲ್ಲ. ಇದು ಸಾರಿಗೆ ಮಂತ್ರಿಗಳ ವೈಫಲ್ಯ, ಲಕ್ಷ್ಮಣ ಸವದಿ ತಮ್ಮ ಪ್ರತಿಷ್ಠೆಯನ್ನ ಬಿಟ್ಟು ಇಲ್ಲಿಗೆ ಬಂದು ಸಮಸ್ಯೆಗಳನ್ನ ಆಲಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಾರಿಗೆ ಸಚಿವರು ಹೊಣೆ. ಹಾಗಾಗಿ ನಾಳೆಯಿಂದ ನಿಮ್ಮ ಬೆಂಬಲಕ್ಕೆ ನಾವು ಕೈ ಜೊತೆ ಜೋಡಿಸುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರ ಸಾರಿಗೆ ಇಲಾಖೆಯನ್ನ ಯಾಕೆ ಸೈಡ್ ನಲ್ಲಿ ಇಡುತ್ತಿದೆ ಅನ್ನೋದು ತಿಳಿಯುತ್ತಿಲ್ಲ. ಎಷ್ಟು ಜನ ಚಾಲಕರನ್ನ ಕೊರೋನಾ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡರು. ಅವರನ್ನ ಯಾಕೆ ಕೊರೊನಾ ವಾರಿಯರಸ್ ಅಂತಾ ಕರೆಯಲಿಲ್ಲ ಎಂದು ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಪ್ರಶ್ನಿಸಿದರು.

ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು. ಆದರೆ ಸರ್ಕಾರ ಈ ಬೇಡಿಕೆ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆ ಈಡೇರುವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ. ಈ ಎಲ್ಲ ಅನಾನುಕೂಲಗಳಿಗೆ ಸಾರಿಗೆ ಸಚಿವರೇ ಕಾರಣ. ಸಚಿವರು ಇಲ್ಲಿಯೇ ಬಂದು ನಮ್ಮ ಸಮಸ್ಯೆ ಆಲಿಸಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ 

ಇನ್ನು ಸಾರಿಗೆ ನೌಕರರಕ್ಕೆ ಹೋರಾಟಕ್ಕೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ, ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಸಹ ಸಾಥ್ ನೀಡಿದ್ದಾರೆ. ಇನ್ನು ಕೊನೆಯದಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆಯ ಎಲ್ಲರೂ ಪ್ರತಿಭಟನೆಗೆ ಬರಬಹುದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್ 

Share This Article
Leave a Comment

Leave a Reply

Your email address will not be published. Required fields are marked *