ಸುಮಲತಾ ಜ್ಯೋತಿಷಿಯಲ್ಲ – ತಿರುಗೇಟು ನೀಡಿದ ಎಚ್‌ಡಿಡಿ

Public TV
1 Min Read

ಬೆಂಗಳೂರು: ಜೆಡಿಎಸ್‍ನಲ್ಲಿ ಮುಂದಿನ ಭವಿಷ್ಯ ಪ್ರಜ್ವಲ್ ರೇವಣ್ಣ ಅಂತ ಹೇಳಿಕೆ ನೀಡಿದ್ದ ಸುಮಲತಾ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಂದಿನ ಪ್ರಜ್ವಲ್ ಭವಿಷ್ಯ ಅಂತ ಹೇಳೋಕೆ ಸುಮಲತಾ ಏನು ಜ್ಯೋತಿಷಿಗಳಾ? ಅವರು ಜ್ಯೋತಿಷಿಗಳಾಗಿ ಹೇಳಿದರೆ ತುಂಬಾ ಸಂತೋಷ. ನನಗೆ ಗೊತ್ತಿಲ್ಲ ಸುಮಲತಾ ಜ್ಯೋತಿಷಿಗಳು ಅಂತ ಎಂದು ತಿರುಗೇಟು ನೀಡಿದರು.

ಸುಮಲತಾ ಬಗ್ಗೆ ನನ್ನ ಬಳಿ ಯಾಕೆ ಮಾತಾಡಿಸ್ತೀರಾ. ದಯಮಾಡಿ ಮಾತಾಡಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವಿನ ಕಿತ್ತಾಟದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಇದರ ಬಗ್ಗೆ ನಾನೇನು ರಿಯಾಕ್ಟ್ ಮಾಡೋದಿಲ್ಲ. ನನಗೆ ವಿಷಯ ಗೊತ್ತಿದೆ. ನಾನು ಇದರಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ಮಂಡ್ಯದಲ್ಲಿ ಏನಾಗುತ್ತೆ ಅಂತ ಮುಂದೆ ಗೊತ್ತಾಗುತ್ತೆ. 2023, 2024 ರಲ್ಲಿ ಕರ್ನಾಟಕ, ಮಂಡ್ಯದ ವಿಷಯ ಏನಾಗುತ್ತೆ ಅಂತ ನಾವು ಇಲ್ಲಿ ಕೂತು ಚರ್ಚೆ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

ಅಕ್ರಮ ಗಣಿಗಾರಿಕೆ ಬಗ್ಗೆ ಯಡಿಯೂರಪ್ಪ ಸರ್ಕಾರದಲ್ಲಿ ದೊಡ್ಡ ಚರ್ಚೆ ಆಯ್ತು. ಯಡಿಯೂರಪ್ಪ ಅವರು ಕ್ರಮ ತಗೋತೀನಿ ಅಂತ ಹೇಳಿದ್ದರು. ಈಗ ಯಡಿಯೂರಪ್ಪ ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ. ಕೆ.ಎಸ್.ಆರ್ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲಾ ವಿಷಯ ಗೊತ್ತಿದೆ. ಈ ಬಗ್ಗೆ ಚರ್ಚೆ ಯಾಕೆ ಬಿಡಿ ಅಂದರು.

ಚೆನ್ನಾಗಿ ಕೆಲಸ ಮಾಡಲಿ:
ಕೇಂದ್ರ ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಕೇಂದ್ರದಲ್ಲಿ ಈಗ ನಮ್ಮ ರಾಜ್ಯದ ಸ್ಥಾನ 4-5 ಆಗಿದೆ. ಇದು ಸಂತೋಷದ ವಿಚಾರ ಎಲ್ಲರೂ ಚೆನ್ನಾಗಿ ಕೆಲಸ ಮಾಡಲಿ. ರಾಜ್ಯಕ್ಕೆ ಹೆಚ್ಚು ಹಣ ತಂದು ಅಭಿವೃದ್ಧಿ ಕೆಲಸ ಮಾಡಿದ್ರೆ ಅವ್ರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *