ಪುದುಚೇರಿಯಲ್ಲಿ ಅರಳಿದ ಕಮಲ

Public TV
1 Min Read

ಪುದುಚೇರಿ: ತಮಿಳುನಾಡಿಗೆ ಅಂಟಿಕೊಂಡೇ ಇರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬೇರೆಯದ್ದೇ ರಾಜಕಾರಣ. ತಮಿಳುನಾಡಿನಲ್ಲಿ ದ್ರಾವಿಡ ರಾಜಕಾರಣವೇ ಹಾಸುಹೊದ್ದು ಮಲಗಿದೆ. ರಾಷ್ಟ್ರೀಯ ಪಕ್ಷಗಳಿಗೂ ಅಲ್ಲಿನ ಜನ ಮಣೆ ಹಾಕುತ್ತವೆ. ಹೀಗಾಗಿಯೇ ಕಳೆದ ಬಾರಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರದಲ್ಲಿತ್ತು. ಈಗ ಬಿಜೆಪಿಯನ್ನು ಒಳಗೊಂಡ ಮೈತ್ರಿಕೂಟಕ್ಕೆ ಜನ ಜೈ ಎಂದಿದ್ದಾರೆ.

ಅಧಿಕಾರ ರಚಿಸಲು ಕೇವಲ ಒಂದು ಸ್ಥಾನದ ಅಗತ್ಯ ಬಿದ್ದಿದೆ. ಪಕ್ಷೇತರರರು ಬೆಂಬಲನೀಡುವ ಸಂಭವ ಇದೆ. ಇದರೊಂದಿಗೆ ದಕ್ಷಿಣ ಭಾರತದಲ್ಲಿ ಇದ್ದೊಂದು ಸರ್ಕಾರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಈಗ ಪುದ್ದುಚೇರಿಯ ಸಿಎಂ ಯಾರಾಗ್ತಾರಾ? ಬಿಜೆಪಿಯವರಾ ಅಥವಾ ಎನ್ ಆರ್ ರಂಗಸ್ವಾಮಿನಾ ಅನ್ನೋದು ಕುತೂಹಲ.

ಯಾರಿಗೆ ಎಷ್ಟು ಕ್ಷೇತ್ರ?
* ಬಿಜೆಪಿ+ – 15
* ಕಾಂಗ್ರೆಸ್+ – 10
* ಇತರೆ – 05

ಪುದುಚ್ಚೆರಿಯಲ್ಲಿ ಕಮಲ ಅರಳಲು ಕಾರಣ
* ಆಡಳಿತ ವಿರೋಧಿ ಅಲೆ
* ಯುಪಿಎನಿಂದ ಪ್ರಮುಖ ನಾಯಕರ ವಲಸೆ
* ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ
* ಬಿಜೆಪಿಗೆ ಶಕ್ತಿ ತುಂಬಿದ ನಮಃ ಶಿವಾಯಂ
* ನಾರಾಯಣಸ್ವಾಮಿಯನ್ನು ಕಾಂಗ್ರೆಸ್ ಕಡೆಗಣಿಸಿದ್ದು

Share This Article
Leave a Comment

Leave a Reply

Your email address will not be published. Required fields are marked *