ಪಿಜಿ ಉದ್ಯಮ ನಷ್ಟದಲ್ಲಿದ್ದು, ಸರ್ಕಾರ ಇತ್ತ ಗಮನ ಹರಿಸಲಿ: ಅರುಣ್ ಕುಮಾರ್

Public TV
1 Min Read

ಬೆಂಗಳೂರು: ಕೊರೋನಾದಿಂದ ಪಿಜಿ ಉದ್ಯಮ ನಷ್ಟದಲ್ಲಿದೆ. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಲಿ ಎಂದು ರಾಜ್ಯ ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.

ಬಿಲ್ಡಿಂಗ್ ಬಾಡಿಗೆ ಕಟ್ಟಲಾಗದೇ ಪರದಾಡ್ತಿದ್ದೇವೆ. ಸರ್ಕಾರ ಕೂಡಲೇ ಪಿಜಿ ಮಾಲೀಕರಿಗೆ ಪ್ರತ್ಯೇಕ ಪ್ಯಾಕೇಜ್ ಜೊತೆಗೆ ಲಾಕ್ ಡೌನ್ ಅವಧಿಯ ನೀರು ಹಾಗೂ ವಿದ್ಯುತ್ ಬಿಲ್ ನ್ನು ಕಡಿತಗೊಳಿಸಬೇಕು. ಕೊರೊನಾ ಹೊಡೆತದಿಂದ ಆರ್ಥಿಕ ಚಟುವಟಿಕೆಗಳು ಸ್ಥಬ್ಧಗೊಂಡಿದ್ದು, ವಿವಿಧ ವಲಯಗಳಿಗೆ ಸರ್ಕಾರ ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಿದೆ. ಆದ್ರೆ ಪಿಜಿ ಉದ್ಯಮದ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ನೋವು ತೋಡಿಕೊಂಡರು.

ಪಿಜಿಯಲ್ಲಿರುವ ಹಲವರು ತಮ್ಮೂರುಗಳಿಗೆ ಹೋಗಿದ್ದು, ಪಿಜಿಗಳೆಲ್ಲವೂ ಖಾಲಿಯಾಗಿವೆ. ಬಾಡಿಗೆ ಕಟ್ಟುವಂತೆ ಬಿಲ್ಡಿಂಗ್ ಮಾಲೀಕರು ಒತ್ತಾಯಿಸ್ತಿದ್ದಾರೆ. ಪಿಜಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡಿ, ಖಾಲಿ ಬಿಲ್ಡಿಂಗ್ ಗೂ ಬಾಡಿಗೆ ಕಟ್ಟಲಾಗದ ಅಸಹಾಯಕ ಸ್ಥಿತಿಯಲ್ಲಿ ಪಿಜಿ ಮಾಲೀಕರಿದ್ದಾರೆ. ಮಾನ್ಯ ಮುಖ್ಯ ಮಂತ್ರಿಗಳು ದಯವಿಟ್ಟು ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *