ಪಬ್ಲಿಕ್ ಟಿವಿ ವರದಿಗಾರ್ತಿ ಪವಿತ್ರ ಕಡ್ತಲಗೆ ಲಯನ್ಸ್ ಮಾಧ್ಯಮ ಪ್ರಶಸ್ತಿ

Public TV
1 Min Read

ಬೆಂಗಳೂರು: ಪಬ್ಲಿಕ್ ಟಿವಿಯ ಮೆಟ್ರೋ ಬ್ಯೂರೋ ಮುಖ್ಯಸ್ಥೆ ಪವಿತ್ರ ಕಡ್ತಲ ಅವರಿಗೆ ಲಯನ್ಸ್ ಮಾಧ್ಯಮ ಪ್ರಶಸ್ತಿ ಲಭಿಸಿದೆ.

ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆ ಪ್ರಯುಕ್ತ ಇಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ-317 ಎಫ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕೋದ್ಯಮ ದಿನಾಚರಣೆಯನ್ನ ಆಯೋಜನೆ ಮಾಡಿತ್ತು.

ಕೊರೊನಾ ಸಮಯದಲ್ಲಿ ವಿಶೇಷ ವರದಿಗಳ ಮೂಲಕ ಜನರ ಮತ್ತು ಸರ್ಕಾರದ ಗಮನ ಸೆಳೆದ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಒಂದು ದಶಕದಿಂದ ವಿಶೇಷ ಸಾಧನೆ ಮಾಡಿರೋ ಪವಿತ್ರ ಕಡ್ತಲ ಅವರಿಗೆ ಗಣ್ಯರು ಲಯನ್ಸ್ ಮಾಧ್ಯಮ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ರು.

ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ. ಸಿ.ಎನ್ ಮಂಜುನಾಥ್, ಲಯನ್ಸ್ ಕ್ಲಬ್‍ನ ದೀಪಕ್ ಸುಮನ್, ವಿವಿ ಕೃಷ್ಣರೆಡ್ಡಿ ಕರ್ನಾಟಕ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಮುರಳೀಧರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.

ಇದೇ ವೇಳೆ, ಹಿರಿಯ ಪತ್ರಕರ್ತರಾದ ರವೀಂದ್ರ ಭಟ್, ಶಿವಾನಂದ ತಗಡೂರು, ಶಾಂತಳಾ, ಕಿರಣ್ ಹೆಚ್ ವಿ, ಮಲ್ಲಪ್ಪ, ರಾನಚಂದ್ರ, ಸ್ವಾತಿ , ದೇವಿಡ್ ಟೆನ್ನಿಸನ್ ಮೊದಲಾದವರನ್ನು ಗೌರವಿಸಲಾಯಿತು

Share This Article
Leave a Comment

Leave a Reply

Your email address will not be published. Required fields are marked *