ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಶುಲ್ಕ ಹೆಚ್ಚಳ ನಿರ್ಧಾರ ವಾಪಸ್ ಪಡೆಯದಿದ್ರೆ ಕಾನೂನು ಕ್ರಮ

Public TV
2 Min Read

– ಖಾಸಗಿ ಶಾಲೆಗಳಿಗೆ ಸುರೇಶ್ ಕುಮಾರ್ ಕೊನೆಯ ಅವಕಾಶ

ಬೆಂಗಳೂರು: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಕೂಲ್ ಫೀಸ್ ಹೆಸರಲ್ಲಿ ವಸೂಲಿಗಿಳಿದಿದ್ದವು. ಇದರಿಂದ ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಲಾಗಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ಖಾಸಗಿ ಶಾಲೆ ಶುಲ್ಕ ಅಭಿಯಾನವನ್ನು ಪ್ರಸಾರ ಮಾಡಿತ್ತು. ಇದೀಗ ಖಾಸಗಿ ಶಾಲೆ ಶುಲ್ಕ ಅಭಿಯಾನಕ್ಕೆ ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ನಾವು ಸೂಚನೆ ಕೊಡುವ ಮೊದಲೇ ಖಾಸಗಿ ಶಾಲೆಗಳು ಶುಲ್ಕವನ್ನು ಹೆಚ್ಚಳ ಮಾಡಿದ್ದವು. ನಮ್ಮ ಸೂಚನೆ ಹೋದ ಬಳಿಕ ಮತ್ತೆ ಶಾಲೆಗಳು ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿವೆ. ಕೆಲವು ಶಾಲೆಗಳು ಶುಲ್ಕವನ್ನು ಹೆಚ್ಚಳ ಮಾಡಿದೆ. ಹೀಗಾಗಿ ನಾವು ಅದಕ್ಕಾಗಿ ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ. ಸಾವಿರಾರು ಪೋಷಕರು ಸಹಾಯವಾಣಿಗೆ ಫೋನ್ ಮಾಡಿದ್ದಾರೆ. ನಮಗೆ ಎಲ್ಲಿಂದ ದೂರ ಬಂದಿದೆ ಎಂಬುದರ ಬಗ್ಗೆ ವಿಚಾರಿಸಿದ್ದೇವೆ ಎಂದರು.

ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತೆ ಇಲ್ಲ. ಶುಲ್ಕ ಹೆಚ್ಚಳ ಬಗ್ಗೆ ನಮಗೆ ಮಾಹಿತಿ ಬಂದಿದೆ. ಖಾಸಗಿ ಶಾಲೆಗಳಿಗೆ ಕೊನೆ ಅವಕಾಶ ಕೊಡಲಾಗಿದೆ. ಮಹಾಮಾರಿ ಕೊರೊನಾದಿಂದ ಜನರು ಕುಗ್ಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಮಾನವೀಯತೆ ತೋರಿಸಬೇಕು. ಅವರಾಗಿಯೇ ಶುಲ್ಕವನ್ನು ಕಡಿಮೆ ಮಾಡಬೇಕು. ಒಂದು ವೇಳೆ ಶಾಲೆಗಳು ಶುಲ್ಕ ಹೆಚ್ಚಳ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ಶಿಕ್ಷಣ ಕಾಯ್ದೆ ಪ್ರಕಾರ ಕಾನೂನು ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಕುಮಾರ್ ಖಾಸಗಿ ಶಾಲೆಗಳಿಗ ಎಚ್ಚರಿಕೆ ನೀಡಿದರು.

ಸುರೇಶ್ ಕುಮಾರ್ ಸಾಫ್ಟ್ ಅಲ್ಲ. ನಾನು ಯಾರ ಲಾಬಿಗೂ ಮಣಿಯುದಿಲ್ಲ. ಖಾಸಗಿ ಶಾಲೆಗಳು ಭಂಡತನ ಮುಂದುವರಿಸಿದರೆ ನಮ್ಮ ಕೈಯಲ್ಲಿ ಅಸ್ತ್ರ ಇದೆ ಅದನ್ನ ಬಳಸುತ್ತೇವೆ. ಸರ್ಕಾರ ಶಾಲೆಯಲ್ಲಿ ಶುಲ್ಕವನ್ನು ಹೆಚ್ಚಿಸಬಾರದು ಎಂದು ಆದೇಶ ಹೊರಡಿಸಿದೆ. ಪೋಷಕರು ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಡಿ. ಪೋಷಕರು ಖಾಸಗಿ ಶಾಲೆಗಳಿಗೆ ಮಣಿಯಬೇಡಿ. ಸರ್ಕಾರದ ಆದೇಶ ನೂರಕ್ಕೆ ನೂರು ಅನುಷ್ಠಾನಕ್ಕೆ ತರುತ್ತೇನೆ. ಅದು ನನ್ನ ಕರ್ತವ್ಯ ಎಂದು ಸುರೇಶ್ ಕುಮಾರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *