ಪತ್ನಿ ಕಣ್ಣೇದುರೇ  ಪತಿ ಸಾವು

Public TV
1 Min Read

ಚಿಕ್ಕಬಳ್ಳಾಪುರ: ಸ್ಕೂಟಿ ಮೇಲೆ ಟಿಪ್ಪರ್ ಹರಿದು ಪತ್ನಿ ಕಣ್ಣೇದುರೇ ಪತಿ ಸಾವನ್ನಪ್ಪಿದ ಭೀಕರ ಅಪಘಾತ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇದನ್ನೂ ಓದಿ:  ಬಿಗ್‍ಬಾಸ್‍ಗೆ ದಾರಿ ತೋರಿಸಿದ ಶುಭಾ

ಜಯಚಂದ್ರಪ್ಪ (62) ಮೃತರಾಗಿದ್ದಾರೆ. ಸ್ಕೂಟಿ ಮೇಲೆ ಟಿಪ್ಪರ್ ಹರಿದ ಪರಿಣಾಮ ಪತ್ನಿಯ ಕಣ್ಣೆದುರಲ್ಲೇ ಪತಿ ಪ್ರಾಣ ಬಿಟ್ಟಿದ್ದಾರೆ. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ವಾಪಸಂದ್ರ ಸೇತುವೆ ಬಳಿಯ ಸಿಎಸ್‍ಎನ್ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿದೆ.

ಹಾರೋಬಂಡೆ ಗ್ರಾಮದ ಜಯಚಂದ್ರಪ್ಪ ಹಾಗೂ ಪತ್ನಿ ಆಂಜಿನಮ್ಮ ಇಬ್ಬರು ಸ್ಕೂಟಿಯಲ್ಲಿ ಬ್ಯಾಂಕ್‍ಗೆ ಹಣ ಕಟ್ಟೋಕೆ ಅಂತ ಚಿಕ್ಕಬಳ್ಳಾಪುರ ನಗರಕ್ಕೆ ಬರುತ್ತಿದ್ದರು. ಆದರೆ ಅತಿ ವೇಗವಾಗಿ ಹಿಂಬದಿಯಿಂದ ಬರ್ತಿದ್ದ ಟಿಪ್ಪರ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯಲಿದ್ದ ಜಯಚಂದ್ರಪ್ಪಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಆಂಜಿನಮ್ಮ ಡಿವೈಡರ್ ಮೇಲೆ ಬಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಸ್ಥಳೀಯರು ಅತಿ ವೇಗದಿಂದ ಸಂಚರಿಸೋ ಟಿಪ್ಪರ್‍ಗಳ ವಿರುದ್ಧ ಏನೂ ಕ್ರಮ ಕೈಗೊಳ್ಳಲ್ಲ ಅಂತ ಗರಂ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *