ಪತಿಯನ್ನು ಬಿಟ್ಟು ಬಂದ 3 ಮಕ್ಕಳ ತಾಯಿ- ಪ್ರಿಯತಮನೇ ಮಚ್ಚಿನಿಂದ ಕೊಚ್ಚಿ ಕೊಂದ

Public TV
1 Min Read

– ಪ್ರಿಯತಮನಿಂದಲೇ ಮಹಿಳೆಯ ಕೊಲೆ

ಮೈಸೂರು: ಪತಿಯನ್ನು ಬಿಟ್ಟು ಪ್ರಿಯತಮನ ಜೊತೆ ಬಂದಿದ್ದ ಮೂರು ಮಕ್ಕಳ ತಾಯಿಯನ್ನು ಆತನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳವಾಡಿಯಲ್ಲಿ ನಡೆದಿದೆ.

ಪ್ರೀತಿ ಕುಮಾರಿ (25) ಮೃತ ಮಹಿಳೆ. ಈಕೆಯ ಅತ್ತೆ ಮಗ ಕಿರಣ್ ಕೊಲೆ ಮಾಡಿದ್ದಾನೆ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರೀತಿ ಕುಮಾರಿ, ಪತಿ ತೊರೆದು ಅತ್ತೆ ಮಗ ಕಿರಣ್ ಜೊತೆಗೆ ವಾಸವಿದ್ದಳು. ಆದರೆ ಕಿರಣ್ ವಿಪರೀತ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆ ಮನೆ ಬಿಟ್ಟು ಹೊಗುತ್ತೇನೆ ಎಂದು ಪ್ರೀತಿ ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ಕಿರಣ್, ಜನರು ಇರುವಾಗಲೇ ಮನೆ ಒಳಗೆ ಎಳೆದುಕೊಂಡು ಹೋಗಿ ಮಚ್ಚಿನಿಂದ ಪ್ರೀತಿ ಕುಮಾರಿ ಮೇಲೆ ಹಲ್ಲೆ ನಡೆಸಿದ್ದಾನೆ.

ಇದರಿಂದಾಗಿ ತಲೆ, ಕೈ, ಹೊಟ್ಟೆ ಭಾಗಕ್ಕೆ ತೀರ್ವ ಗಾಯಗಳಾಗಿದ್ದವು. ತಕ್ಷಣವೇ ಪ್ರೀತಿ ಕುಮಾರಿಯನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಪ್ರೀತಿ ಸಾವನ್ನಪ್ಪಿದ್ದಾಳೆ. ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯನಗರ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *